ಹೈದ್ರಾಬಾದ್ ನಲ್ಲಿ ಕುಖ್ಯಾತ ಮೋಸ್ಟ್ ವಾಂಟೆಡ್ ಮಾವೋವಾದಿ ನಾಯಕ ಅರೆಸ್ಟ್: ಕರ್ನಾಟಕ, ಕೇರಳ ಸೇರಿದಂತೆ ಇತರ ರಾಜ್ಯಗಳ ಪೊಲೀಸರು ಈತನನ್ನೇ ಹುಡುಕುತ್ತಿದ್ದದ್ದು ಯಾಕೆ..? - Mahanayaka
12:57 PM Saturday 21 - September 2024

ಹೈದ್ರಾಬಾದ್ ನಲ್ಲಿ ಕುಖ್ಯಾತ ಮೋಸ್ಟ್ ವಾಂಟೆಡ್ ಮಾವೋವಾದಿ ನಾಯಕ ಅರೆಸ್ಟ್: ಕರ್ನಾಟಕ, ಕೇರಳ ಸೇರಿದಂತೆ ಇತರ ರಾಜ್ಯಗಳ ಪೊಲೀಸರು ಈತನನ್ನೇ ಹುಡುಕುತ್ತಿದ್ದದ್ದು ಯಾಕೆ..?

16/09/2023

ಹೈದರಾಬಾದ್ ಪೊಲೀಸರು ಕುಖ್ಯಾತ ಮೋಸ್ಟ್ ವಾಂಟೆಡ್ ಮಾವೋವಾದಿ ನಾಯಕ ಸಂಜಯ್ ದೀಪಕ್ ನನ್ನು ಬಂಧಿಸಿದ್ದಾರೆ. ಮಾವೋವಾದಿ ಕೇಂದ್ರ ಸಮಿತಿ ಸದಸ್ಯ ಸಂಜಯ್ ದೀಪಕ್ ರಾವ್ ಅವರನ್ನು ಬಂಧಿಸಲಾಗಿದೆ.

ಸಂಜಯ್ ದೀಪಕ್ ರಾವ್ ಮೇಲೆ ತಮಿಳುನಾಡು, ಕರ್ನಾಟಕ, ಕೇರಳ, ಮಹಾರಾಷ್ಟ್ರ ಪೊಲೀಸರ ಜೊತೆಗೆ ಎನ್ಐಎಗೂ ದೀಪಕ್ ರಾವ್ ಮೋಸ್ಟ್ ವಾಂಟೆಡ್ ಆಗಿದ್ದರು. ಮಹಾರಾಷ್ಟ್ರ ಸರ್ಕಾರ ದೀಪಕ್ ರಾವ್ ಮೇಲೆ 25 ಲಕ್ಷ ಬಹುಮಾನ ಘೋಷಣೆ ಮಾಡಿತ್ತು.

ಬಂಧಿತ ಮಾವೋವಾದಿ ಅಬೂಜ್ಮಡ್ ಗೆ ಹೋಗಲು 4 ದಿನಗಳ ಹಿಂದೆ ಹೈದರಾಬಾದ್ ಗೆ ಆಗಮಿಸಿದ್ದ ವೇಳೆ ಈ ಕುರಿತು ಎಸ್ಐಬಿಯಿಂದ ಬಂದ ಖಚಿತ ಮಾಹಿತಿ ಪಡೆದ ಸೈಬರಾಬಾದ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಹೈದರಾಬಾದ್ ನ ಕೂಕಟ್ಪಲ್ಲಿಯ ಮಲೇಷಿಯಾ ಟೌನ್ ನೌಕೆಯಲ್ಲಿ ಸಂದೀಪ್ ವಾಸವಾಗಿದ್ದರು ಎಂದು ಹೈದರಾಬಾದ್ ಡಿಜಿಪಿ ಅಂಜನೀಕುಮಾರ್ ಹೇಳಿದ್ದಾರೆ.


Provided by

ಬಂಧಿತ ಸಂಜಯ್ ದೀಪಕ್ ಮಾವೋ ಕೇಂದ್ರ ಸಮಿತಿ ಸದಸ್ಯರಾಗಿದ್ದು, ಪಶ್ಚಿಮ ಕನುಮಲ ವಿಶೇಷ ಜಂಟಿ ಸಮಿತಿ ಕಾರ್ಯದರ್ಶಿಯಾಗಿದ್ದಾರೆ. ಕರ್ನಾಟಕ, ತಮಿಳುನಾಡು, ಕೇರಳ ಟ್ರೈಜಂಕ್ಷನ್ ಏರಿಯಾದಲ್ಲಿ ಅವರು ನಿರ್ಣಾಯಕರಾಗಿದ್ದಾರೆ. ಮಹಾರಾಷ್ಟ್ರ, ಕೇರಳ, ತಮಿಳುನಾಡು , ಕರ್ನಾಟಕ ಪೊಲೀಸರು ಈತನಿಗಾಗಿ ಶೋಧ ನಡೆಸುತ್ತಿದ್ದರು.

ಇತ್ತೀಚಿನ ಸುದ್ದಿ