ಕಾಂಗ್ರೆಸ್ ಲಿಂಗಾಯತ ಸಿಎಂ ಘೋಷಿಸಲಿ: ಕೈಪಡೆಗೆ ಸೋಮಣ್ಣ ಸವಾಲ್

ಚಾಮರಾಜನಗರ: ಇಷ್ಟೆಲ್ಲಾ ಮಾತನಾಡುವ ಕಾಂಗ್ರೆಸ್ ವೀರಶೈವ ಲಿಂಗಾಯತರೇ ಸಿಎಂ ಎಂದು ಘೋಷಿಸಲಿ ಎಂದು ಸಚಿವ ಸೋಮಣ್ಣ ಸವಾಲ್ ಹಾಕಿದರು.
ಚಾಮರಾಜನಗರದ ವಿವಿಧ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸುವ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಬಿಜೆಪಿ ಲಿಂಗಾಯತ ವಿರೋಧಿಗಳು ಎಂದು ಕಾಂಗ್ರೆಸ್ ಹೇಳುತ್ತಿದೆ. ಆದರೆ, ವೀರೇಂದ್ರ ಪಾಟೀಲರನ್ನು ತೆಗೆದಿದ್ದು ಯಾರು.? ರಾಜಶೇಖರ ಮೂರ್ತಿ ಅವರನ್ನು ಓಡಿಸಿದ್ದು ಯಾರು.? ನಿಜಲಿಂಗಪ್ಪ ಅವರನ್ನು ದೇಶಬಿಟ್ಟು ಕಳುಹಿಸಿದ್ದು ಯಾರು..? ಈ ಕಾಂಗ್ರೆಸ್ ಗೆ ಲಿಂಗಾಯತರನ್ನು ಇಲ್ಲದಾಗ ಏನಾಯ್ತು..! ಜಗದೀಶ್ ಶೆಟ್ಟರ್, ಸವದಿ ಎಂಥಾ ಹೇಳ್ತಾ ಇದಾರೆ, ಲಿಂಗಾಯತ ಸಿಎಂ ಮಾಡಲಿ..! ಇವೆಲ್ಲಾ ಕಣ್ಣೊರೆಸುವ ತಂತ್ರ ಎಂದು ಕೈಪಡೆ ವಿರುದ್ಧ ಕಿಡಿಕಾರಿದರು.
ಲಿಂಗಾಯತರು ದಡ್ಡರಲ್ಲ, ಅವರು ಮತ ಬ್ಯಾಂಕ್ ಆಗಿ ಇಟ್ಟುಕೊಂಡು ವರ್ಗಗಳಿಗೆ ಕಾಂಗ್ರೆಸ್ ಏನು ಮಾಡಿಲ್ಲ, ಜನರು ಬದಲಾವಣೆ ಬಯಸುತ್ತಿದ್ದಾರೆ. ಲಿಂಗಾಯತರನ್ನು ಬ್ಲಾಕ್ ಮೇಲ್ ಮಾಡಿ ಏನೋ ಮಾಡುತ್ತೇವೆ ಎಂದು ಆಸೆ ಇಟ್ಟುಕೊಂಡಿದ್ದರೇ ಅವರಿಗೇ ನಿರಾಸೆ ಆಗಲಿದೆ. ಅವರಲ್ಲಿ ಅಷ್ಟು ದೊಡ್ಡ ವಿಷನ್ ಇದ್ದರೇ ಲಿಂಗಾಯತರನ್ನು ಸಿಎಂ ಮಾಡುತ್ತೇವೆಂದು ಹೇಳಲಿ, ಯೂಸ್ ಅಂಡ್ ಥ್ರೋ ಮಾತುಗಳು ಬೇಡ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಮೋದಿ, ಯಡಿಯೂರಪ್ಪ, ಬೊಮ್ಮಾಯಿ ಉತ್ತಮ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಅದಕ್ಕೇ, ಕಾಂಗ್ರೆಸ್ ನವರು ಒಂದೊಂದು ಗಂಟೆಗೆ ಒಂದು, ಘಳಿಗೆಗೊಂದು ದಾಳ ಹಾಕ್ತಾ ಇದ್ದಾರೆ, ಆದರೆ ಅವೆಲ್ಲಾ ಏನು ಆಗಲ್ಲ ಎಂದರು.
ವೀರಶೈವ ಲಿಂಗಾಯತ ಸಮುದಾಯವನ್ನು ಮೂಲೆಗುಂಪು ಮಾಡುವ ವಿಚಾರ ಇಲ್ಲಾ, ಆ ರೀತಿ ಮಾಡುವುದು ಕಾಂಗ್ರೆಸ್ ಮಾತ್ರ. ಈ ಬಗ್ಗೆ ಎಲ್ಲವನ್ನೂ ನಿನ್ನೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ, ಸದ್ಯದ ಪರಿಸ್ಥಿತಿ ಅವಲೋಕಿಸಲಾಗಿದೆ ಎಂದು ಲಿಂಗಾಯತ ನಾಯಕರ ಸಭೆ ಬಗ್ಗೆ ಹೇಳಿದರು.
ಬಿ.ಎಲ್. ಸಂತೋಷ್ ಓರ್ವ ಸಕ್ರಿಯ ಕಾರ್ಯಕರ್ತ, 24*7 ಕೆಲಸಗಾರ, ನಾಯಕರನ್ನು ತುಳಿಯುವ ಹುಚ್ಚಿಲ್ಲ, ಕಾಂಗ್ರೆಸ್ ನವರಿಗೆ ಮಾತನಾಡಲು ಏನು ಇಲ್ಲಾ, ಅದಕ್ಕೆ ಮೊಸಳೆ ಕಣ್ಣೀರು ಸುರಿಸುತ್ತಿದೆ, ಮೋದಿ, ಅಮಿತ್ ಷಾ ವಿರುದ್ಧ ಏನು ಹೇಳಲಾಗಲ್ಲದಿದ್ದರಿಂದ ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸುತ್ತಿದೆ, ಲಿಂಗಾಯತರಿಗೆ ಕಾಂಗ್ರೆಸ್ ಎಷ್ಟು ಚುರುಮುರಿ ಕೊಟ್ಟಿದೆ ಎಂದು ಸ್ವಾಭಿಮಾನಿ ಲಿಂಗಾಯತರಿಗೆ ಗೊತ್ತಿದೆ ಎಂದು ಕೈಪಡೆಯನ್ನು ಜರಿದರು.
ಜಗದೀಶ್ ಶೆಟ್ಟರ್ ಇಷ್ಟೊಂದು ವೀಕ್ ಅಂತಾ ಗೊತ್ತಿರಲಿಲ್ಲ:
ಜಗದೀಶ್ ಶೆಟ್ಟರ್ ನನಗೆ ಬೇಕಾದ ಆತ್ಮೀಯರು. ಕರೆದು ಅವರಿಗೆ ವರಿಷ್ಠರು ವಿನಂತಿಸಿಕೊಂಡರು, ಪತ್ನಿಗೆ ಟಿಕೆಟ್ , ರಾಜ್ಯಸಭಾಗೆ ಕಳುಹಿಸುತ್ತೇವೆ ಎಂದಿದ್ರು. ಅವರನ್ನು ಮಂತ್ರಿ, ಸ್ಪೀಕರ್, ಸಿಎಂ ಮಾಡಿದ್ದೇವು. ಆದರೆ, ಯಾರದೋ ಮಾತಿಗೆ ಈ ನಡೆ ತೆಗೆದುಕೊಂಡಿದ್ದಾರೆ. ಜಗದೀಶ್ ಶೆಟ್ಟರ್ ಮನಸ್ಥಿತಿ ಇಷ್ಟೊಂದು ವೀಕ್ ಎಂದು ಗೊತ್ತಿರಲಿಲ್ಲ ಎಂದರು.
ಬಹಳ ಬುದ್ದಿವಂತ ಶೆಟ್ಟರ್ ವೀಕ್ ಮೈಂಡ್ ಆಗಿದ್ದಾರೆ. 6 ತಿಂಗಳು ಅವರೂ ಕಾಂಗ್ರೆಸ್ ನಲ್ಲಿ ಇರಲು ಸಾಧ್ಯವಿಲ್ಲ, ಅಷ್ಟು ಉಸಿರು ಕಟ್ಟುವ ವಾತಾವರಣ ಇದೆ. ಒಂದು ಕಡೆ ಸಿದ್ದರಾಮಯ್ಯ, ಇನ್ನೊಂದು ಕಡೆ ಡಿಕೆಶಿ ಮತ್ತೊಂದು ಕಡೆ ಖರ್ಗೆ ಎಂದು ಲೇವಡಿ ಮಾಡಿದರು.
ರಾಜಕಾರಣ ಶಾಶ್ವತವಲ್ಲ ಆದ್ದರಿಂದ ಜಗದೀಶ್ ಶೆಟ್ಟರ್ ಅವರು ಬಿಜೆಪಿ ವಿರುದ್ಧ ಮಾತನಾಡುವುದನ್ನು ನಿಲ್ಲಿಸಬೇಕು, ದಯವಿಟ್ಟು ವಿನಂತಿ ಮಾಡುವುದೇನೆಂದರೆ ಬಿಜೆಪಿ ಬಗ್ಗೆ, ಬಿಜೆಪಿ ನಡವಳಿಕೆ ಬಗ್ಗೆ ಅವರು ಚಿಂತಿಸಬೇಕು ಮನವಿ ಮಾಡಿದರು.