SHOCKING: ಮಾದಪ್ಪನ ದರ್ಶನ ಪಡೆದು ಜನರ ಎದುರೇ ಬೆಟ್ಟದಿಂದ ಹಾರಿದ ಭಕ್ತ! - Mahanayaka

SHOCKING: ಮಾದಪ್ಪನ ದರ್ಶನ ಪಡೆದು ಜನರ ಎದುರೇ ಬೆಟ್ಟದಿಂದ ಹಾರಿದ ಭಕ್ತ!

madappana betta
20/02/2023

ಚಾಮರಾಜನಗರ: ಪ್ರಸಿದ್ಧ ಯಾತ್ರಾಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ಭಕ್ತಾದಿಗಳು ಬೆಚ್ಚಿ ಬಿದ್ದಿರುವ ಘಟನೆ ಇಂದು ನಡೆದಿದೆ.


Provided by

ಹೌದು…, ಮಲೆಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿರುವ “‘ನಾಗಮಲೆ” ಎಂಬಲ್ಲಿ ಬಂಡೆ ಮೇಲಿಂದ ಹಾರಿ ಬೆಂಗಳೂರಿನ ಕೆಂಗೇರಿಯ ಶ್ರೀನಿಧಿ ಎಂಬ ಯುವಕ ಸಾವಿಗೆ ಶರಣಾಗಲು ಯತ್ನಿಸಿದ್ದಾನೆ.

ನಾಗಮಲೆಗೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಭಕ್ತರೊಟ್ಟಿಗೆ ಸೇರಿಕೊಂಡ ಶ್ರೀನಿಧಿ ತನ್ನ ತಾಯಿಯೊಟ್ಟಿಗೆ ಮೊಬೈಲ್ ನಲ್ಲಿ ಮಾತನಾಡಿ, ಹರಕೆ ಘಂಟೆಯನ್ನು ದೇವರಿಗೆ ಅರ್ಪಿಸಿ ಪೂಜೆ ಸಲ್ಲಿಸಿ ಹಿಂತಿರುಗುವಾಗ ಬಂಡೆಯೊಂದರ ಮೇಲೆ ಹತ್ತಿ ಜಿಗಿದಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ