ಸಂತೆ ಮಾರ್ಕೆಟ್ ಒಳಗಡೆ ಮಲಗಿದ ಸ್ಥಿತಿಯಲ್ಲೇ ಮೃತಪಟ್ಟ ವ್ಯಕ್ತಿ - Mahanayaka
12:27 PM Wednesday 5 - February 2025

ಸಂತೆ ಮಾರ್ಕೆಟ್ ಒಳಗಡೆ ಮಲಗಿದ ಸ್ಥಿತಿಯಲ್ಲೇ ಮೃತಪಟ್ಟ ವ್ಯಕ್ತಿ

udupi
10/08/2022

ಕುಂದಾಪುರ: ಮಲಗಿದ ಸ್ಥಿತಿಯಲ್ಲೆ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕುಂದಾಪುರ   ತಾಲೂಕಿನ   ಸಿದ್ದಾಪುರ  ಗ್ರಾಮದ  ಸಂತೆ ಮಾರ್ಕೆಟ್  ನಲ್ಲಿ ಆ.9ರಂದು ನಡೆದಿದೆ.

ಮೃತರನ್ನು ಗುಡ್ಡೆಯಂಗಡಿ ಗ್ರಾಮದ ಹೆಮ್ಮುಂಜೆ ನಿವಾಸಿ 35 ವರ್ಷದ ಸುಧಾಕರ ಆಚಾರ್ಯ ಎಂದು ಗುರುತಿಸಲಾಗಿದೆ. ಇವರು ವಿಪರೀತ ಶರಾಬು ಕುಡಿಯುವ ಚಟ  ಹೊಂದಿದ್ದರು.

ಆ.9ರಂದು ಸಿದ್ದಾಪುರ ಗ್ರಾಮದ  ಸಂತೆ ಮಾರ್ಕೆಟ್ ಒಳಗಡೆ ಸುಧಾಕರ್ ಅವರು ಮೃತಪಟ್ಟಿದ್ದಾರೆ. ಅವರು ವಿಪರೀತ ಮದ್ಯಸೇವನೆ ಅಥವಾ ಇನ್ಯಾವುದೋ ಕಾಯಿಲೆಯಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ