ಮಗಳ ಮನೆಗೆ ಹೋಗ್ತಿದ್ದ ವೇಳೆ ದಾಳಿ: 'ಬೀಫ್ ಸಾಗಾಟ' ಎಂಬ ಸುಳ್ಳು ಹೇಳಿ ವೃದ್ದನಿಗೆ ಹಲ್ಲೆ - Mahanayaka
4:39 AM Saturday 14 - September 2024

ಮಗಳ ಮನೆಗೆ ಹೋಗ್ತಿದ್ದ ವೇಳೆ ದಾಳಿ: ‘ಬೀಫ್ ಸಾಗಾಟ’ ಎಂಬ ಸುಳ್ಳು ಹೇಳಿ ವೃದ್ದನಿಗೆ ಹಲ್ಲೆ

31/08/2024

ಬೀಫ್ ಸಾಗಿಸುತ್ತಿದ್ದಾರೆ ಎಂದು ಶಂಕಿಸಿ ದುಷ್ಕರ್ಮಿಗಳು ಹಿರಿಯ ನಾಗರಿಕರೊಬ್ಬರ ಮೇಲೆ ಹಲ್ಲೆ ಮಾಡಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ತನ್ನ ಮಗಳನ್ನು ಭೇಟಿಯಾಗಲು ರೈಲಲ್ಲಿ ಕಲ್ಯಾಣ್‌ಗೆ ತೆರಳುತ್ತಿದ್ದ ವೇಳೆ ಇಗತ್‌ಪುರಿ ಬಳಿ ರೈಲಿನೊಳಗೆ ಅಮಾನುಷವಾಗಿ ಥಳಿಸಲಾಗಿದೆ.

ಜಲಗಾಂವ್ ಜಿಲ್ಲೆಯ ಹಳ್ಳಿಯ ಹಾಜಿ ಅಶ್ರಫ್ ಮುನ್ಯಾರ್, ಕಲ್ಯಾಣ್‌ಗೆ ತೆರಳುತ್ತಿದ್ದಾಗ ಎನ್ನಲಾಗಿದೆ.
ದಾಳಿಯ ನಂತರ, ವೃದ್ಧ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವದಂತಿಗಳು ಹರಡಿದ್ದವು. ವದಂತಿಗಳನ್ನು ಅವರ ಕುಟುಂಬವು ನಿರಾಕರಿಸಿದೆ. ಅಶ್ರಫ್ ಮುನ್ಯಾರ್ ಪ್ರಸ್ತುತ ಕಲ್ಯಾಣ್‌ನಲ್ಲಿರುವ ತಮ್ಮ ಮಗಳ ಮನೆಯಲ್ಲಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಅವರ ಪುತ್ರ ಅಶ್ಫಾಕ್ ಇಗತ್‌ಪುರಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಬಂಧ ದೂರು ದಾಖಲಿಸಿದ್ದಾರೆ.

ಎರಡೂ ವಿಡಿಯೋಗಳಲ್ಲಿ ಕಂಡುಬರುವ ಈ ಎಲ್ಲಾ ಗೂಂಡಾಗಳ ವಿರುದ್ಧ ಕಠಿಣ ಕ್ರಮವನ್ನು ನಾವು ನಿರೀಕ್ಷಿಸಬಹುದೇ ಎಂದು ಆಲ್ಟ್‌ ನ್ಯೂಸ್‌ ನ ಝುಬೈರ್‌ ಪ್ರಶ್ನಿಸಿದ್ದಾರೆ.


Provided by

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ