ಮಂಗಳೂರು: ವಲಸೆ ಕಾರ್ಮಿಕನ ಬರ್ಬರ ಹತ್ಯೆ ಖಂಡನೀಯ: ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಸದಸ್ಯ ಜಾನಿ ಕೆ.ಪಿ.

johnny k p
30/04/2025

ಮಂಗಳೂರಿನ ಕುಡುಪು ಬಳಿ ಯುವ ವಲಸೆ ಕಾರ್ಮಿಕನೊಬ್ಬನನ್ನು ಸುಮಾರು ಮೂವತ್ತು ಜನ ಯುವಕರ ತಂಡವೊಂದು ಅತ್ಯಂತ ಬರ್ಬರವಾಗಿ ಕಲ್ಲಿನಿಂದ ಜಜ್ಜಿ ಕೊಲೆಗೈದಿರುವುದು ಅತ್ಯಂತ ಖಂಡನೀಯ ಮತ್ತು ಜಿಲ್ಲೆಯ ಜನತೆ ಆತಂಕ ಪಡಬೇಕಾದ ವಿಷಯ , ಇದು ನಾಗರಿಕ ಸಮಾಜ  ತಲೆತಗ್ಗಿಸುವಂತೆ ಮಾಡಿದ ಘಟನೆ ಎಂದು ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸದಸ್ಯರಾದ ಜಾನಿ.ಕೆ.ಪಿ. ಅಭಿಪ್ರಾಯಪಟ್ಟರು.

ಈ ಘಟನೆಯಲ್ಲಿ ಮಂಗಳೂರಿನ ಶಾಸಕರೊಬ್ಬರು ಕೆಲವು ಯುವಕರನ್ನು ಪ್ರಕರಣದಿಂದ ಬಚಾವ್ ಮಾಡಲು ಪ್ರಯತ್ನಿಸುತ್ತಿರುವ ಮಾಹಿತಿ ಹೊರಬರುತ್ತಿದ್ದು, ಪ್ರಕರಣವನ್ನು ಮುಚ್ಚಿಹಾಕಲು ಕೆಲವು ಪೊಲೀಸರು ಪ್ರಯತ್ನ ನಡೆಸಿದರೆನ್ನುವ ಮಾಹಿತಿಯೂ ಇದೆ ಎಂದು ಅವರು ತಿಳಿಸಿದ್ದಾರೆ.

ಇಂತಹಾ ಪ್ರಯತ್ನಗಳು ಅತ್ಯಂತ ಹೇಯ ಕೃತ್ಯವಾಗಿದ್ದು, ಜನಸಾಮಾನ್ಯರು ಇದನ್ನು ಖಂಡಿಸಲೇಬೇಕಾಗಿದೆ. ಇಂತಹಾ ಅಧಿಕಾರಿಗಳನ್ನು ಶೀಘ್ರವೇ ಅಮಾನತು ಮಾಡಿ ಉನ್ನತ ಮಟ್ಟದ ತನಿಖೆ ನಡೆಸಬೇಕು. ವಲಸೆ ಕಾರ್ಮಿಕ ಆತ ಯಾರೇ ಆಗಿರಲಿ ಅವರ ಕುಟುಂಬಕ್ಕೆ ನ್ಯಾಯ ಸಿಗುವಂತಾಗಬೇಕು ಎಂದು ಜಾನಿ ಕೆ.ಪಿ. ಸರಕಾರಕ್ಕೆ ಒತ್ತಾಯಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version