ಮಣಿಪಾಲ: ಪ್ರವಾಸಿಗರನ್ನು ಕೊಂಡೊಯ್ಯುವ ತೆಪ್ಪಕಳವು

30/09/2023
ಮಣಿಪಾಲ: ಶೀಂಬ್ರ-ಪರಾರಿ ಸೇತುವೆ ಕೆಳಗಡೆ ಡಿವೈನ್ ಪ್ಯಾಡಲ್ ಸಂಸ್ಥೆಗೆ ಸೇರಿದ ಪ್ರವಾಸಿಗರನ್ನು ಕೊಂಡೊಯ್ಯುವ ಹುಟ್ಟುಹಾಕುವ ದೋಣಿ(ತೆಪ್ಪ)ಯನ್ನು ಕಳವು ಮಾಡಿರುವ ಘಟನೆ ಸೆ.26ರಂದು ನಡೆದಿದೆ.
ಮಣಿಪಾಲದ ಸುತ್ತಮುತ್ತ ಪೂಜಿಸಿದ ಸುಮಾರು 6 ಗಣೇಶ ವಿಗ್ರಹಗಳನ್ನು ಈ ತೆಪ್ಪದಲ್ಲಿಯೇ ತೆಗೆದುಕೊಂಡು ಹೋಗಿ ವಿಸರ್ಜನೆ ಮಾಡಲಾಗಿದೆ. ಈ ಕಾರ್ಯಕ್ರಮ ಮುಗಿದ ನಂತರ ದಡದಲ್ಲಿ ಇರಿಸಿದ್ದ ತೆಪ್ಪವನ್ನು ಕಳವು ಮಾಡಲಾಗಿದೆ ಎಂದು ಸಂಸ್ಥೆಯ ಮಾಲಕರು ದೂರಿದ್ದಾರೆ