ಮರಕ್ಕೆ ಅಪ್ಪಳಿಸಿದ ಕಾರು | ಇಬ್ಬರು ಯುವಕರ ದಾರುಣ ಸಾವು - Mahanayaka
9:36 PM Thursday 19 - September 2024

ಮರಕ್ಕೆ ಅಪ್ಪಳಿಸಿದ ಕಾರು | ಇಬ್ಬರು ಯುವಕರ ದಾರುಣ ಸಾವು

31/01/2021

ಮಂಡ್ಯ:  ನಿಯಂತ್ರಣ ಕಳೆದುಕೊಂಡ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಮಗುಚಿ ಬಿದ್ದು ರಸ್ತೆ ಬದಿಯ ಮರಕ್ಕೆ ಅಪ್ಪಳಿಸಿದ ಘಟನೆ  ನಾಗಮಂಗಲ ತಾಲೂಕಿನ ಬೆಂಗಳೂರು-ಮoಗಳೂರು ರಾಷ್ಟ್ರೀಯ ಹೆದ್ದಾರಿ 75ರ ಹೊಸಕ್ಕಿಪಾಳ್ಯ ಗೇಟ್ ಬಳಿ ನಡೆದಿದ್ದು, ಪರಿಣಾಮವಾಗಿ ಇಬ್ಬರು ಸಾವನಪ್ಪಿದ್ದಾರೆ.

ಬೆoಗಳೂರಿನ ಬಸವನಗುಡಿ ನಿವಾಸಿ ಎ.ಶಂಕರ್‌ಪ್ರಸಾದ್(20) ಮತ್ತು ಆಂಧ್ರಪ್ರದೇಶ ಮೂಲದ ಬೆಂಗಳೂರಿನ ಬಿಕಾಸಿಪುರ ನಿವಾಸಿ ಸಿ.ಷಣ್ಮುಖ ಶ್ರೀನಿವಾಸ್(22)  ಮೃತಪಟ್ಟವರು ಎಂದು ತಿಳಿದು ಬಂದಿದೆ.

ಬೆಂಗಳೂರಿನ ಅಕ್ಷರ್ ಗೌಡ , ಬಾಬ್ ಚಂಗಪ್ಪ ಮತ್ತು ಅಭಿಲಾಷ್ ಇದೇ ಅಪಘಾತದಲ್ಲಿ ಗಾಯಗೊಂಡಿದ್ದಾರೆ.  ಗಾಯಾಳುಗಳನ್ನು ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನಾ ಸ್ಥಳಕ್ಕೆ ಬೆಳ್ಳೂರು ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.


Provided by

ಇತ್ತೀಚಿನ ಸುದ್ದಿ