ನಮ್ಮ ಪ್ರಾಂಶುಪಾಲರು ಪ್ರತಿದಿನ ಕುರಾನ್, ಬೈಬಲ್, ಭಗವದ್ಗೀತೆ ಓದಿಸುತ್ತಿದ್ದರು: ಮುಸ್ಕಾನ್ - Mahanayaka
9:49 PM Thursday 19 - September 2024

ನಮ್ಮ ಪ್ರಾಂಶುಪಾಲರು ಪ್ರತಿದಿನ ಕುರಾನ್, ಬೈಬಲ್, ಭಗವದ್ಗೀತೆ ಓದಿಸುತ್ತಿದ್ದರು: ಮುಸ್ಕಾನ್

muskan mandya
15/03/2022

ಮಂಡ್ಯ: ಕೋರ್ಟ್ ತೀರ್ಪು ಏನು ಬರುತ್ತದೆ ಎಂದು ನೋಡುತ್ತೇವೆ. ಎಲ್ಲರೂ ಶಾಂತಿ ಕಾಪಾಡಬೇಕು. ನಾವು ಮೊದಲು ಇದ್ದಂತೆ ಅಣ್ಣ-ತಂಗಿಯರಂತೆ ಇರೋಣ ಎಂದು ಮಂಡ್ಯದಲ್ಲಿ ಅಲ್ಲಾಹು ಅಕ್ಬರ್ ಕೂಗಿದ್ದ ವಿದ್ಯಾರ್ಥಿನಿ ಮುಸ್ಕಾನ್ ಹೇಳಿದ್ದಾರೆ.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸಂವಿಧಾನ‌ ಹಾಗೂ‌ ದೇವರ ಮೇಲೆ ನಂಬಿಕೆ ಇದೆ. ತೀರ್ಪು ಬರುವವರೆಗೂ ನಾವು ಕಾಯುತ್ತೇವೆ. ಕಾಲೇಜಿನಲ್ಲಿ ಎಲ್ಲರ ರಕ್ಷಣೆ ಮಾಡಿಕೊಂಡಿದ್ದೇವು, ಹಾಗೆಯೇ ಇರೋಣ ಎಂದು ಹೇಳಿದರು.

ಇನ್ನು ನಾನು‌ ಓದಿರುವ ಸ್ಕೂಲ್​ನಲ್ಲಿ ಪ್ರತಿಯೊಬ್ಬರಿಗೂ ಸಮಾನ ಹಕ್ಕು ಹೇಳಿಕೊಟ್ಟಿದ್ದಾರೆ. ನಮ್ಮ ಪ್ರಾಂಶುಪಾಲರು ಪ್ರತಿದಿನ ಕುರಾನ್, ಬೈಬಲ್, ಭಗವದ್ಗೀತೆ ಓದಿಸುತ್ತಿದ್ದರು. ಸ್ವಲ್ಪ ತಪ್ಪು ತಿಳುವಳಿಕೆಯಿಂದ ಹೀಗಾಗಿದೆ. ಎಲ್ಲವೂ ಸರಿಹೋಗುತ್ತದೆ. ನಾವು ಮೊದಲು ಹಿಜಾಬ್ ಧರಿಸಿಯೆ ಹೋಗುತ್ತಿದ್ದೇವು. ಆಗ ಏನೂ ತೊಂದರೆ ಇರಲಿಲ್ಲ. ನಮ್ಮ ಸಂವಿಧಾನದ ಮೇಲೆ ನಂಬಿಕೆ ಇದೆ, ನಾವು ಕಾಯುತ್ತೇವೆ ಎಂದರು.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ವಿಪರೀತ ಶಾಖದಲ್ಲಿ ದೇಹವನ್ನು ತಂಪಾಗಿಸಲು ಏನು ಕುಡಿಯಬೇಕು?  ಏನು ತಪ್ಪಿಸಬೇಕು?

ಉತ್ತರ ಪ್ರದೇಶದಲ್ಲಿ ಹಿಂಸಾಚಾರ: ಕಕ್ರಾಲಾ ಪ್ರದೇಶದಲ್ಲಿ ಹಲ್ಲೆ, ಗುಂಡಿನ ದಾಳಿ

ಸರ್ಕಾರದ ‘ವಸ್ತ್ರ ಸಂಹಿತೆ’ ಆದೇಶ ಕಾನೂನುಬದ್ಧವಾಗಿದೆ  ಎಂದ ಹೈಕೋರ್ಟ್

ಹಿಜಾಬ್ ವಿವಾದ: ಹಿಜಾಬ್ ಧರಿಸುವುದು ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂದ ಹೈಕೋರ್ಟ್

ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳಿಂದ ಮಹಿಳೆಯ ಮಂಗಲ್ಯ ಸರ ಅಪಹರಣ

 

ಇತ್ತೀಚಿನ ಸುದ್ದಿ