ಛತ್ತೀಸ್ ಗಢದಲ್ಲಿ ಬಿಜೆಪಿ ನಾಯಕನ ಹತ್ಯೆ: ಮೃತದೇಹದ ಮೇಲೆ ಎಚ್ಚರಿಕೆ ಪತ್ರ ಇಟ್ಟು ನಕ್ಸಲರು ಎಸ್ಕೇಪ್..! - Mahanayaka
9:03 PM Friday 20 - September 2024

ಛತ್ತೀಸ್ ಗಢದಲ್ಲಿ ಬಿಜೆಪಿ ನಾಯಕನ ಹತ್ಯೆ: ಮೃತದೇಹದ ಮೇಲೆ ಎಚ್ಚರಿಕೆ ಪತ್ರ ಇಟ್ಟು ನಕ್ಸಲರು ಎಸ್ಕೇಪ್..!

21/06/2023

ಛತ್ತೀಸ್ ಗಢದಲ್ಲಿ ನಕ್ಸಲೀಯರ ಗುಂಪೊಂದು ಬಿಜೆಪಿ ಮುಖಂಡ ಮತ್ತು ಮಾಜಿ ಸರಪಂಚ್ ಕಾಕಾ ಅರ್ಜುನ್ ಎಂಬುವವರನ್ನು ಬುಧವಾರ ಹತ್ಯೆ ಮಾಡಿದೆ.

ನಾಯಕನನ್ನು ಹತ್ಯೆ ಮಾಡಿದ ನಂತರ ಹಂತಕರು ಶವವನ್ನು ರಸ್ತೆಯ ಮಧ್ಯದಲ್ಲಿ ಬಿಟ್ಟು ಅವರ ದೇಹದ ಮೇಲೆ ಎಚ್ಚರಿಕೆಯ ಪತ್ರವನ್ನು ಇಟ್ಟು ಪರಾರಿಯಾಗಿದ್ದಾರೆ.
ಈ ಹತ್ಯೆಯನ್ನು ಖಂಡಿಸಿರುವ ಛತ್ತೀಸ್ ಗಢ ಬಿಜೆಪಿ ಪ್ರಧಾನ ಕಾರ್ಯದರ್ಶಿ ಒ.ಪಿ.ಚೌಧರಿ, ಕಾಂಗ್ರೆಸ್ ಬೆಂಬಲವಿಲ್ಲದೆ ನಾಯಕನನ್ನು ಕೊಲ್ಲಲು ಸಾಧ್ಯವಿಲ್ಲ. ಈ ಕೊಲೆ ‘ರಾಜಕೀಯ ಹತ್ಯೆ’ ಎಂದು ಕರೆದಿದ್ದಾರೆ.

ಬಸ್ತಾರ್ ವಿಭಾಗದಲ್ಲಿ ಬಿಜೆಪಿಯ ಹಿರಿಯ ಪದಾಧಿಕಾರಿಗಳನ್ನು ಗುರಿಯಾಗಿಸಿಕೊಂಡು ನಡೆದ ಈ ರಾಜಕೀಯ ಹತ್ಯೆಗಳು ನಕ್ಸಲರಿಗೆ ಕಾಂಗ್ರೆಸ್ ಬೆಂಬಲವಿಲ್ಲದೆ ಇದನ್ನು ಮಾಡಲು ಸಾಧ್ಯವಿಲ್ಲ. ಬಿಜೆಪಿ ನಾಯಕರನ್ನು ಗುರಿಯಾಗಿಸಲು ಪಕ್ಷವು ಅವರೊಂದಿಗೆ ಕೈ ಜೋಡಿಸುತ್ತಿದೆ ಎಂದು ತೋರುತ್ತದೆ. ಇದು ಅತ್ಯಂತ ದುರದೃಷ್ಟಕರ. ನಾನು ಅದನ್ನು ಬಲವಾಗಿ ಖಂಡಿಸುತ್ತೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ