ಬಿಜೆಪಿ ಸರ್ಕಾರ ಇರುವಲ್ಲಿ ಮುಸ್ಲಿಮರು ಮಾತ್ರವಲ್ಲ, ಕ್ರೈಸ್ತರ ಮೇಲೂ ದಾಳಿ: ಯುಸಿಎಫ್ ನಲ್ಲಿ ಆತಂಕಕಾರಿ ಮಾಹಿತಿ ಬಹಿರಂಗ - Mahanayaka

ಬಿಜೆಪಿ ಸರ್ಕಾರ ಇರುವಲ್ಲಿ ಮುಸ್ಲಿಮರು ಮಾತ್ರವಲ್ಲ, ಕ್ರೈಸ್ತರ ಮೇಲೂ ದಾಳಿ: ಯುಸಿಎಫ್ ನಲ್ಲಿ ಆತಂಕಕಾರಿ ಮಾಹಿತಿ ಬಹಿರಂಗ

22/11/2024

ಬಿಜೆಪಿ ಸರಕಾರಗಳು ಇರುವಲ್ಲಿ ಮುಸ್ಲಿಮರ ಮೇಲೆ ಮಾತ್ರ ದಾಳಿ ನಡೆಯುತ್ತವೆ ಎಂದುಕೊಳ್ಳಬೇಕಿಲ್ಲ. ಇದು ಕ್ರೈಸ್ತರನ್ನೂ ಆವರಿಸುತ್ತಿದೆ. ಆದರೆ ಇದು ವರದಿ ಆಗುತ್ತಿಲ್ಲವಷ್ಟೇ. ಭಾರತದಲ್ಲಿ ಕ್ರೈಸ್ತರ ವಿರುದ್ಧ ಹಿಂಸಾಚಾರ ಹೆಚ್ಚಿದ್ದು, 2024 ಅಕ್ಟೋಬರ್ ಅಂತ್ಯದ ವೇಳೆಗೆ ಯುನೈಟೆಡ್ ಕ್ರಿಶ್ಚಿಯನ್ ಫೋರಮ್ ಯುಸಿಎಫ್ ನ ಸಹಾಯವಾಣಿಯಲ್ಲಿ 673 ಘಟನೆಗಳು ವರದಿಯಾಗಿವೆ. ಈ ಹಿಂಸಾಚಾರದ ಘಟನೆಗಳ ಪೈಕಿ ಕೇವಲ 47ರಲ್ಲಿ ಎಫ್‌ಐಆರ್‌ಗಳು ದಾಖಲಾಗಿವೆ.


Provided by

ಯುಸಿಎಫ್ ದಿಲ್ಲಿ ಮೂಲದ ನಾಗರಿಕ ಸಮಾಜ ಸಂಘಟನೆಯಾಗಿದ್ದು, ಕ್ರೈಸ್ತರ ಸಮಸ್ಯೆಗಳನ್ನು ಕೇಂದ್ರೀಕರಿಸಿದೆ. ಅದರ ‘ಹಿಂಸಾಚಾರ ನಿಗಾ ವರದಿ 2024’ರ ಪ್ರಕಾರ ಒಟ್ಟು 673 ಹಿಂಸಾಚಾರದ ಘಟನೆಗಳ ಪೈಕಿ ಕೇವಲ 47ರಲ್ಲಿ ಎಫ್‌ಐಆರ್‌ಗಳು ದಾಖಲಾಗಿವೆ. ಇದರಲ್ಲಿ ಉತ್ತರ ಪ್ರದೇಶದಲ್ಲಿ ಅತ್ಯಂತ ಹೆಚ್ಚು182 ಹಿಂಸಾಚಾರದ ಘಟನೆಗಳು ವರದಿಯಾಗಿದ್ದು, ಛತ್ತೀಸ್‌ಗಡ 139 ನಂತರದ ಸ್ಥಾನದಲ್ಲಿದೆ.

‘ಭಾರತದಲ್ಲಿ ಕ್ರೈಸ್ತರಿಗೆ ತಮ್ಮ ಧರ್ಮವನ್ನು ಪಾಲಿಸುವುದು ಕಷ್ಟಕರವಾಗಿದೆ. ದೇಶಾದ್ಯಂತ ಕೈಸ್ತರ ವಿರುದ್ಧ ಹಿಂಸಾಚಾರ ಹೆಚ್ಚಾಗಿದೆ. 2014ರಲ್ಲಿ ಕೈಸ್ತರ ವಿರುದ್ಧ ಹಿಂಸಾಚಾರದ ಘಟನೆಗಳ ಸಂಖ್ಯೆ ನೂರಕ್ಕೂ ಕಡಿಮೆ ಇತ್ತು. 2018ರಲ್ಲಿ ಅದು 292ಕ್ಕೇರಿದ್ದು,ಆಗಿನಿಂದ ಪ್ರತಿವರ್ಷವೂ ಇಂತಹ ಘಟನೆಗಳು ಹೆಚ್ಚುತ್ತಲೇ ಇವೆ. ಕಳೆದ ವರ್ಷ ನಾವು ಸುಮಾರು 750 ಘಟನೆಗಳನ್ನು ದಾಖಲಿಸಿಕೊಂಂಡಿದ್ದೇವೆ. ಅಂದರೆ ನಮ್ಮ ದೇಶದಲ್ಲಿ ಪ್ರತಿ ದಿನ ಇಬ್ಬರು ಕೈಸ್ತರ ಮೇಲೆ ದಾಳಿಗಳು ನಡೆದಿವೆ’ ಎಂದು ಯುಸಿಎಫ್‌ನ ರಾಷ್ಟ್ರೀಯ ಸಂಯೋಜಕ ಎ.ಸಿ.ಮೈಕೆಲ್ ಹೇಳಿದ್ದಾರೆ.


Provided by

ಹಿಂಸಾಚಾರದ ಘಟನೆಗಳಲ್ಲಿ ದೈಹಿಕ ಹಿಂಸೆ,ಕೊಲೆ,ಲೈಂಗಿಕ ಹಿಂಸೆ,ಬೆದರಿಕೆ, ಸಾಮಾಜಿಕ ಬಹಿಷ್ಕಾರ,ಧಾರ್ಮಿಕ ಆಸ್ತಿಗಳಿಗೆ ಹಾನಿ,ಧಾರ್ಮಿಕ ಚಿಹ್ನೆಗಳ ಅಪವಿತ್ರಗೊಳಿಸುವಿಕೆ ಮತ್ತು ಪ್ರಾರ್ಥನಾ ಸೇವೆಗಳಿಗೆ ಅಡ್ಡಿಸೇರಿವೆ. ಪೊಲೀಸರು ಎಫ್‌ಐಆರ್‌ಗಳನ್ನು ದಾಖಲಿಸಿಕೊಳ್ಳುವ ಬದಲು ಬಲಿಪಶುಗಳನ್ನು ಗುರಿಯಾಗಿಸಿಕೊಳ್ಳುತ್ತಿದ್ದಾರೆ. ಪೊಲೀಸರು ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಬದಲು ಬಲವಂತದ ಮತಾಂತರದ ಸುಳ್ಳು ಆರೋಪಗಳಲ್ಲಿ ಕ್ರೈಸ್ತ ಧರ್ಮಗುರುಗಳನ್ನು ಬಂಧಿಸುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ