ಪತ್ನಿಯ ಮೇಲೆ ಕೋಪಗೊಂಡು ಕೊಡಲಿಯಿಂದ  ಹಲ್ಲೆ ನಡೆಸಿದ | ಬಳಿಕ ಆತ ಮಾಡಿದ ಕೆಲಸ ಏನು ಗೊತ್ತಾ? - Mahanayaka
8:23 PM Friday 20 - September 2024

ಪತ್ನಿಯ ಮೇಲೆ ಕೋಪಗೊಂಡು ಕೊಡಲಿಯಿಂದ  ಹಲ್ಲೆ ನಡೆಸಿದ | ಬಳಿಕ ಆತ ಮಾಡಿದ ಕೆಲಸ ಏನು ಗೊತ್ತಾ?

08/03/2021

ಹುಬ್ಬಳ್ಳಿ: ಮನೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಪತಿಯೋರ್ವ ಪತ್ನಿಯ ಮೇಲೆ ಕೊಡಲಿಯಿಂದ ದಾಳಿ ನಡೆಸಿದ್ದು,  ಆಕೆ ಗಂಭೀರವಾಗಿ ಗಾಯಗೊಂಡಾಗ ತಾನೇ ಆಸ್ಪತ್ರೆಗೆ ದಾಖಲಿಸಿದ್ದಾನೆ.

ಪವಿತ್ರ ಮಾದರ ಎಂಬ ಮಹಿಳೆ ಹಲ್ಲೆಗೊಳಗಾದ ಮಹಿಳೆಯಾಗಿದ್ದು, ಪತಿ ಈರಪ್ಪ  ಹಲ್ಲೆ ನಡೆಸಿದವನಾಗಿದ್ದಾನೆ.  ಈ ದಂಪತಿ ಸುಳ್ಳ ಗ್ರಾಮದಲ್ಲಿ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ. ಪ್ರತಿ ದಿನ ಪತಿ ಹಾಗೂ ಪತ್ನಿ ನಡುವೆ ಜಗಳವಾಗುತ್ತಿತ್ತು. ಜಗಳ ಅತಿರೇಕಕ್ಕೆ ಹೋದಾಗ ಪತಿ ತನ್ನ ಪತ್ನಿಯನ್ನು ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ.

ಹಲ್ಲೆಯ ಪರಿಣಾಮಪವಿತ್ರಾಗೆ ತೀವ್ರ ರಕ್ತಸ್ರಾವವಾಗಿದ್ದು, ಈ ವೇಳೆ ಪತಿ ತಾನೇ ಹುಬ್ಬಳ್ಳಿಯ ಕೀಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾನೆ. ಹಲ್ಲೆಯ ಪರಿಣಾಮ ಪವಿತ್ರ ಅವರಿಗೆ  ಗಂಭೀರವಾಗಿ ಗಾಯವಾಗಿದೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಈರಪ್ಪನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


Provided by

ಇತ್ತೀಚಿನ ಸುದ್ದಿ