ಮಕ್ಕಳ ಜಗಳದ ವಿಷಯದಲ್ಲಿ ಪತಿ ಪತ್ನಿಯರ ನಡುವೆ ಕಲಹ ನಡೆದು ದುರಂತ ಅಂತ್ಯ! - Mahanayaka
9:39 AM Wednesday 5 - February 2025

ಮಕ್ಕಳ ಜಗಳದ ವಿಷಯದಲ್ಲಿ ಪತಿ ಪತ್ನಿಯರ ನಡುವೆ ಕಲಹ ನಡೆದು ದುರಂತ ಅಂತ್ಯ!

25/02/2021

ಮೈಸೂರು: ಮಕ್ಕಳು ಜಗಳವಾಡಿದ ವಿಚಾರದಲ್ಲಿ ಪತಿಯು ಪತ್ನಿಗೆ ಬುದ್ಧಿವಾದ ಹೇಳಿದ್ದು, ಪತಿಯ ಈ ವರ್ತನೆಯಿಂದ ಬೇಸತ್ತು ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತಿಯು ಯಾವ ರೀತಿ ಬುದ್ಧಿ ಹೇಳಿದ್ದಾರೆ ತಿಳಿದಿಲ್ಲ. ಆದರೆ ಮಕ್ಕಳ ಗಲಾಟೆ ವಿಚಾರವಾಗಿ ಪತಿ-ಪತ್ನಿಯರ ನಡುವೆ ಕಲಹಕ್ಕೆ ಕಾರಣವಾಗಿದ್ದು, ದುರಂತ ಅಂತ್ಯವಾಗಿದೆ.

ಮೈಸೂರಿನ ವಿಜಯನಗರ ಬಡಾವಣೆಯ 4ನೇ ಹಂತದಲ್ಲಿ ಈ ಘಟನೆ ನಡೆದಿದೆ. 28 ವರ್ಷದ ನಂದಿನಿ ಆತ್ಮಹತ್ಯೆಗೆ ಶರಣಾದ ಮಹಿಳೆಯಾಗಿದ್ದಾರೆ. ಮೂಲತಃ ಚಿಕ್ಕಮಗಳೂರಿನ ಮಹಿಳೆಯಾಗಿದ್ದ ನಂದಿನಿ 5 ವರ್ಷಗಳ ಹಿಂದೆ ಮೈಸೂರಿನ ಅಭಿಲಾಷ್ ಅವರನ್ನು ಮದುವೆಯಾಗಿದ್ದರು.

ಪ್ರಾಥಮಿಕ ಮಾಹಿತಿಯ ಪ್ರಕಾರ ನಂದಿನಿ ಅವರಿಗೆ ಇಬ್ಬರು ಮಕ್ಕಳಿದ್ದು, ಮಕ್ಕಳು ತಮ್ಮ ವಯಸ್ಸಿಗೆ ಸಹಜವಾಗಿ ಜಗಳವಾಡುತ್ತಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಪತಿ ಪತ್ನಿಯರ ನಡುವೆ ಕಲಹ ಏರ್ಪಟ್ಟಿದೆ. ಮಕ್ಕಳನ್ನು ಸಮಾಧಾನ ಮಾಡುವಂತೆ ಗಂಡ ಬುದ್ಧಿವಾದ ಹೇಳಿದ್ದಾರೆನ್ನಲಾಗಿದ್ದು, ಇದರಿಂದ ನೊಂದ ನಂದಿನಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಘಟನೆ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು,ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ