'ಶಾಂತಿ ನಮ್ಮ ಕಡೆ' ಎಂದ ಪ್ರಧಾನಿ ಮೋದಿ: 'ಭಾರತ ನಮ್ಮ ಕಡೆ ಇರಬೇಕೆಂದ' ಉಕ್ರೇನ್ ಅಧ್ಯಕ್ಷ..! - Mahanayaka
12:41 PM Friday 13 - September 2024

‘ಶಾಂತಿ ನಮ್ಮ ಕಡೆ’ ಎಂದ ಪ್ರಧಾನಿ ಮೋದಿ: ‘ಭಾರತ ನಮ್ಮ ಕಡೆ ಇರಬೇಕೆಂದ’ ಉಕ್ರೇನ್ ಅಧ್ಯಕ್ಷ..!

24/08/2024

ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಕೀವ್ ನಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು. ರಷ್ಯಾದೊಂದಿಗೆ ನಡೆಯುತ್ತಿರುವ ದೇಶದ ಸಂಘರ್ಷದಲ್ಲಿ ಶಾಂತಿಗಾಗಿ ಭಾರತದ ನಿಲುವನ್ನು ಒತ್ತಿ ಹೇಳಿದರು. ಮತ್ತೊಂದೆಡೆ ಝೆಲೆನ್ಸ್ಕಿ ಅವರು ಭಾರತವು ಉಕ್ರೇನ್ ಪರವಾಗಿ ಇರಬೇಕೆಂದು ಮನವಿ ಮಾಡಿದರು.

ಇದಕ್ಕೂ ಮುನ್ನ ಪ್ರಧಾನಿ ಮೋದಿ ಉಕ್ರೇನ್ ಅಧ್ಯಕ್ಷರನ್ನು ಅಪ್ಪಿಕೊಳ್ಳುವ ಮೊದಲು ಉಭಯ ನಾಯಕರು ಕೈಕುಲುಕಿದರು. ಇವರಿಬ್ಬರು ಯುದ್ಧ ಪೀಡಿತ ದೇಶದ ಹುತಾತ್ಮರ ಸ್ಮಾರಕಕ್ಕ್ವ್ ಭೇಟಿ ನೀಡಿದಾಗ ಭಾರತೀಯ ನಾಯಕನ ಕೈ ಝೆಲೆನ್ಸ್ಕಿ ಅವರ ಭುಜದ ಮೇಲೆ ಇತ್ತು. ಇದು ಉಕ್ರೇನ್‌ನೊಂದಿಗೆ ಭಾರತದ ಒಗ್ಗಟ್ಟಿನ ಸಂಕೇತವಾಗಿದೆ.

ಯುದ್ದ ಸಂಘರ್ಷವು ವಿಶೇಷವಾಗಿ ಚಿಕ್ಕ ಮಕ್ಕಳಿಗೆ ವಿನಾಶಕಾರಿಯಾಗಿದೆ. ಪ್ರಾಣ ಕಳೆದುಕೊಂಡ ಮಕ್ಕಳ ಕುಟುಂಬಗಳಿಗೆ ನನ್ನ ಹೃದಯ ಮಿಡಿಯುತ್ತದೆ ಮತ್ತು ಅವರ ದುಃಖವನ್ನು ನಿವಾರಿಸುವ ಶಕ್ತಿಯನ್ನು ಅವರು ಪಡೆಯಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.


Provided by

1991 ರಲ್ಲಿ ಕೀವ್ ಸೋವಿಯತ್ ಒಕ್ಕೂಟದಿಂದ ಸ್ವಾತಂತ್ರ್ಯ ಪಡೆದ ನಂತರ ಉಕ್ರೇನ್ ಗೆ ಭಾರತೀಯ ಪ್ರಧಾನಿಯೊಬ್ಬರು ನೀಡಿದ ಮೊದಲ ಭೇಟಿ ಇದಾಗಿದ್ದು, ರಷ್ಯಾ-ಉಕ್ರೇನ್ ಯುದ್ಧದ ಮಧ್ಯೆ ಪ್ರಧಾನಿ ಮೋದಿಯವರ ಭೇಟಿ ಆಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ