ಪ್ರೇಯಸಿಯ ಕೈಕಾಲು ಕಟ್ಟಿ ಸೂಟ್ ಕೇಸ್ ನಲ್ಲಿ ತುಂಬಿಸಿ ಕಾಡಿಗೆಸೆದ ಪ್ರಿಯಕರ! - Mahanayaka

ಪ್ರೇಯಸಿಯ ಕೈಕಾಲು ಕಟ್ಟಿ ಸೂಟ್ ಕೇಸ್ ನಲ್ಲಿ ತುಂಬಿಸಿ ಕಾಡಿಗೆಸೆದ ಪ್ರಿಯಕರ!

police
26/09/2021

ಪ್ರೇಯಸಿಯೊಂದಿಗೆ ಜಗಳವಾಡಿ, ಆಕೆಯ ಕೈಕಾಲು ಕಟ್ಟಿ ಹಾಕಿ ಸೂಟ್ ಕೇಸ್ ನಲ್ಲಿ ಜೀವಂತವಾಗಿ ತುಂಬಿಸಿ ಕಾಡಿನಲ್ಲಿ ಎಸೆದಿದ್ದ. ಆರೋಪಿಗೆ 30 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ನ್ಯೂಯಾರ್ಕ್​​ನ ವೈಟ್​ ಪ್ಲೇನ್ಸ್​​ ನ ಫೆಡರಲ್​ ನ್ಯಾಯಾಲಯದ ನ್ಯಾಯಾಧೀಶ ವಿನ್ಸೆಂಟ್ ಬ್ರಿಚೆಟ್ಟಿ ಪ್ರಕಟಿಸಿದ್ದಾರೆ.

26 ವರ್ಷ ವಯಸ್ಸಿನ ಜೇವಿಯರ್​ ಡಾ.ಸಿಲ್ವಾ  ಈ ಶಿಕ್ಷೆಗೆ ಗುರಿಯಾದವನಾಗಿದ್ದು, 2019ರಲ್ಲಿ ಈತ ಮಾಡಿದ್ದ ಕೃತ್ಯಕ್ಕೆ ಶಿಕ್ಷೆ ನೀಡಲಾಗಿದೆ. ಬುಕ್ ​ಸ್ಟೋರ್​ ಒಂದರಲ್ಲಿ ಕೆಲಸ ಮಾಡುತ್ತಿದ್ದ 24 ವರ್ಷದ ಯುವತಿ ವ್ಯಾಲೆರಿ ರೆಯೆಸ್ ಯ ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ಡಾ.ಸಿಲ್ವಾ ವಿರುದ್ಧ ಕಳೆದ ವರ್ಷ ಪ್ರಕರಣ ದಾಖಲಾಗಿತ್ತು.

ಡಾ ಸಿಲ್ವಾ ಒಬ್ಬ ಸ್ವಾರ್ಥಿ, ಆಸೆಬುರುಕ ಎಂದು ರೆಯೆಸ್ ಳ​ ತಾಯಿ ಕೂಡ ಕೋರ್ಟ್​ ನಲ್ಲಿ ಹೇಳಿಕೆ ನೀಡಿದ್ದರು. ಡಾ.ಸಿಲ್ವಾ, ತನಗೂ ಮತ್ತು ರೆಯೆಸ್ ​ಗೂ ಸಂಬಂಧವಿತ್ತು. ಆದರೆ ಬ್ರೇಕ್​ ಅಪ್​ ಆಗಿತ್ತು. ಅದಾದ 9 ತಿಂಗಳ ನಂತರ ಅವಳ ಅಪಾರ್ಟ್​ಮೆಂಟ್​ ನಲ್ಲೇ ನಮ್ಮಿಬ್ಬರಿಗೂ ಸಿಕ್ಕಾಪಟೆ ಜಗಳ ನಡೆದಿರುವುದು ನಿಜ ಎಂದು ಕೋರ್ಟ್ ನಲ್ಲಿ ಒಪ್ಪಿಕೊಂಡಿದ್ದ. ಜಗಳದ ಬಳಿಕ  ಸೂಟ್​ ಕೇಸ್​ ನಲ್ಲಿ ರೆಯೆಸ್ ಳನ್ನು ತುಂಬಿ ಗ್ರೀನ್​ ವಿಚ್​ ಕಾಡಿನಲ್ಲಿ ಎಸೆದಿದ್ದ. ಅದು ಒಂದು ವಾರದ ಬಳಿಕ ವ್ಯಕ್ತಿಯೊಬ್ಬರಿಗೆ ಸಿಕ್ಕಿತ್ತು. ಅದಾಗಲೇ ರೆಯೆಸ್​ ಉಸಿರುಕಟ್ಟಿ ಮೃತಪಟ್ಟಿದ್ದಳು.

ಪ್ರಕರಣ ದಾಖಲಾದ ಬಳಿಕ ಡಾ.ಸಿಲ್ವಾ, ರೆಯೆಸ್ ತಾಯಿ  ಎದುರು ಬಂದು ಕಣ್ಣೀರು ಹಾಕಿ ಕ್ಷಮೆ ಕೇಳಿದ್ದ. ಈ ವಿಚಾರವನ್ನು ಕೋರ್ಟ್ ನಲ್ಲಿ ಸಿಲ್ವಾ ಲಾಯರ್ ಬಲವಾಗಿ ವಾದಿಸಿದ್ದರು. ಆತ ತನ್ನ ಕೃತ್ಯಕ್ಕೆ ಪಶ್ಚಾತಾಪ ಪಡುತ್ತಿದ್ದಾನೆ. ಅವರಿಗೆ ಕ್ಷಮೆ ನೀಡಬೇಕು ಎಂದು ಕೋರಿದ್ದರು.

ಆದರೆ, ಡಾ.ಸಿಲ್ವಾನ ಲಾಯರ್ ನ ವಾದವನ್ನು ಪ್ರಾಸಿಕ್ಯೂಟರ್ ಒಪ್ಪಲಿಲ್ಲ. ಯುವತಿಯನ್ನು ಸೂಟ್ ​ಕೇಸ್​ ನಲ್ಲಿ ಹಾಕುವಾಗ ಆತ ಪಶ್ಚಾತ್ತಾಪ ಪಡಲಿಲ್ಲ. ಅಷ್ಟೇ ಅಲ್ಲ, ಆಕೆಯದ್ದೇ ಡೆಬಿಟ್​ ಕಾರ್ಡ್​ ಬಳಸಿ 5000 ಡಾಲರ್​ ಗಳಷ್ಟು ಹಣ ವಿತ್​ ಡ್ರಾ ಮಾಡಿದ್ದಾನೆ. ಅವಳ ಐಪ್ಯಾಡ್​ ಕೂಡ ಮಾರಾಟ ಮಾಡಿದ್ದಾನೆ ಎಂದು ನ್ಯಾಯಾಧೀಶರಿಗೆ ಹೇಳಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj

ಇನ್ನಷ್ಟು ಸುದ್ದಿಗಳು…

ಚಿಕಿತ್ಸಾಲಯದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರಿಗೆ ಲೈಂಗಿಕ ಕಿರುಕುಳ: ಮಾಲಿಕ ಸಹಿತ ಮೂವರು ಅರೆಸ್ಟ್

ಪ್ರತಿಭಟನೆ ಹೆಸರಲ್ಲಿ ಜನರಿಗೆ ತೊಂದರೆ ಕೊಡುವುದು ಬೇಡ | ಭಾರತ್ ಬಂದ್ ಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ

‘ತಾಲಿಬಾನಿ ಬಿಜೆಪಿ’ ಭಾರತವನ್ನು ಆಳಲು ಸಾಧ್ಯವಿಲ್ಲ | ಮಮತಾ ಬ್ಯಾನರ್ಜಿ ಕಿಡಿ

ಅಕ್ಷರಸ್ಥರೇ ಇವತ್ತು ಬುದ್ಧ, ಬಸವ, ಅಂಬೇಡ್ಕರ್ ಅವರಿಗೆ ಮೋಸ ಮಾಡುತ್ತಿದ್ದಾರೆ | ಡಾ.ಎಚ್.ಟಿ. ಪೋತೆ

ಶಾಕಿಂಗ್ ನ್ಯೂಸ್: ಹುಟ್ಟು ಹಬ್ಬದ ಪಾರ್ಟಿಗೆ ಆಗಮಿಸಿದ್ದ ಮಹಿಳಾ ಪೊಲೀಸ್ ಮೇಲೆ ಸಾಮೂಹಿಕ ಅತ್ಯಾಚಾರ

ರಾಜ್ಯದಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ: 17 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ | ಆರೋಪಿ ಅರೆಸ್ಟ್

“ಗದ್ದೆ ನೋಡಲು ಹೋಗೋಣ ಬಾ” ಎಂದು ಪತ್ನಿಯನ್ನು ಕರೆದೊಯ್ದು  ಹತ್ಯೆ ಮಾಡಿದವನಿಗೆ ಜೀವಾವಧಿ ಶಿಕ್ಷೆ

ಮೊಬೈಲ್ ಟವರ್ ಗೆ ಹತ್ತಿಕೊಂಡ ಬೆಂಕಿ: ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ

ಇತ್ತೀಚಿನ ಸುದ್ದಿ