ಗೊಂಬೆಯನ್ನು ಬಳಸಿ ಮನೆಯ ಮುಂದೆಯೇ ವಾಮಾಚಾರ! - Mahanayaka
3:57 AM Thursday 19 - September 2024

ಗೊಂಬೆಯನ್ನು ಬಳಸಿ ಮನೆಯ ಮುಂದೆಯೇ ವಾಮಾಚಾರ!

black magic
23/05/2023

ಚಾಮರಾಜನಗರ: ಜಿಲ್ಲೆಯ ಹನೂರು ತಾಲ್ಲೂಕಿನ ರಾಮಾಪುರದಲ್ಲಿ ಮೌಢ್ಯಾಚರಣೆ ಪ್ರಕರಣವೊಂದು ನಡೆದಿದ್ದು, ವ್ಯಕ್ತಿಯೋರ್ವರ ಮನೆಯ ಮುಂದೆ ದುಷ್ಕರ್ಮಿಗಳು ವಾಮಾಚಾರ ನಡೆಸಿ ಬೆದರಿಸಿರುವ ಘಟನೆ ನಡೆದಿದೆ.

ರಾಮಾಪುರದ ಬಡಾವಣೆಯೊಂದರ ನಿವಾಸಿ ಅಯ್ಯಂಗಾರ್   ಮನೆಯ ಮುಂದೆ ವಾಮಾಚಾರ ನಡೆಸಲಾಗಿದ್ದು, ಮನೆಯ ಮುಂದೆ ಗೊಂಬೆ ಮಾಡಿ ಅದರ ಸುತ್ತ ಹರಿಶಿನ ಕುಂಕುಮ ಹಾಕಿ ವಾಮಾಚಾರ ನಡೆಸಲಾಗಿದೆ.

ಮನೆಯ ಮುಂದೆ ವಾಮಾಚಾರ ಮಾಡಿರುವುದನ್ನು ಕಂಡು ಕಂಗಲಾದ ಮನೆಯ ಮಂದಿ, ರಾಮಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.  ಮತದಾನ ವೇಳೆಯೂ ಹನೂರಿನಲ್ಲಿ ಮಾಟಮಂತ್ರದ ಮೌಢ್ಯ ಜೋರಾಗಿಯೇ ಸದ್ದು ಮಾಡಿತ್ತು.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

 ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ