ರಮೇಶ್ ಜಾರಕಿಹೊಳಿ ಅಮಾಯಕ ಪಾಪ: ಹೆಚ್.ಡಿ.ಕುಮಾರಸ್ವಾಮಿ - Mahanayaka
4:28 PM Friday 20 - September 2024

ರಮೇಶ್ ಜಾರಕಿಹೊಳಿ ಅಮಾಯಕ ಪಾಪ: ಹೆಚ್.ಡಿ.ಕುಮಾರಸ್ವಾಮಿ

09/03/2021

ಬೆಂಗಳೂರು: ರಮೇಶ್ ಜಾರಕಿಹೊಳಿ ಪಾಪ ಅಮಾಯಕರು. ರಾಜಕಾರಣಕ್ಕಾಗಿ ಈ ಮಟ್ಟಕ್ಕೆ ಯಾರು ಕೂಡ ಇಳಿಯಬಾರದು.  ನಾವೆಂದೂ ಸಿಡಿಗಳನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ರಮೇಶ್ ಜಾರಕಿಹೊಳಿ ಸಿಡಿಗೆ ಸಂಬಂಧಪಟ್ಟಂತೆ ಪತ್ರಕರ್ತರ ಜೊತೆಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಅಮಾಯಕರಾಗಿದ್ದಾರೆ.  ಆ ಹೆಣ್ಣು ಮಗಳು ನಿಜವಾಗಿಯೂ ಸಂತ್ರಸ್ತೆಯಾಗಿದ್ದರೆ, ಆಕೆ ಏಕೆ ಸಮಾಜದ  ಮುಂದೆ ಬರುತ್ತಿಲ್ಲ, ಆಕೆಯ ಕುಟುಂಬಸ್ಥರು ಯಾಕೆ ಸಮಾಜದ ಮುಂದೆ ಬರುತ್ತಿಲ್ಲ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ನಮ್ಮ ಎಚ್ಚರದಲ್ಲಿ ನಾವು ಇರಬೇಕು. ಮಹಾಭಾರತ ರಾಮಾಯಣ ಆಗಿರುವುದು ಕೂಡ ಗಂಡು-ಹೆಣ್ಣಿನಿಂದಲೇ ಅಲ್ಲವೇ?  ಎಂದು ಅವರು ಹೇಳಿದರು. ಜೊತೆಗೆ 6 ಮಂದಿ ಸಚಿವರು ಕೋರ್ಟ್ ಮೊರೆ ಹೋಗಿರುವುದರ ವಿರುದ್ಧ  ಮಾತನಾಡಿದ ಅವರು,  12 ಜನ ಮುಂಬೈಗೆ ಹೋಗಿದ್ದರು. ಅಲ್ಲಿ ಆ ಪುಣ್ಯಾತ್ಮರು ಏನು ಮಾಡಿದ್ದಾರೋ? ಈ ಮಟ್ಟಕ್ಕೆ ಯಾರೂ ಇಳಿಯ ಬಾರದು  ಎಂದು ಅವರು ಹೇಳಿದರು.


Provided by

ಇತ್ತೀಚಿನ ಸುದ್ದಿ