ಅಪಘಾತದಿಂದ ಗಾಯಗೊಂಡಿದ್ದ ನಾಗರಹಾವಿಗೆ ಉರಗ ಪ್ರೇಮಿ ಆರೀಫ್ ಚಿಕಿತ್ಸೆ - Mahanayaka
1:56 AM Wednesday 5 - February 2025

ಅಪಘಾತದಿಂದ ಗಾಯಗೊಂಡಿದ್ದ ನಾಗರಹಾವಿಗೆ ಉರಗ ಪ್ರೇಮಿ ಆರೀಫ್ ಚಿಕಿತ್ಸೆ

cobra
22/11/2024

ಕೊಟ್ಟಿಗೆಹಾರ: ರಸ್ತೆ ದಾಟುತ್ತಿದ್ದಾಗ  ವಾಹನ ಅಪಘಾತ ಸಂಭವಿಸಿ ಗಾಯಗೊಂಡ  ನಾಗರಹಾವಿಗೆ ಉರಗ ಪ್ರೇಮಿ ಮೊಹಮ್ಮದ್ ಆರೀಫ್ ಚಿಕಿತ್ಸೆ ನೀಡಿ ರಕ್ಷಣೆ ಮಾಡಿದ ಘಟನೆ ಬಣಕಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಬಣಕಲ್ ಪಶು ಆಸ್ಪತ್ರೆಯಲ್ಲಿ ನಾಗರ ಹಾವಿನ ಹೊಟ್ಟೆಯ ಬಳಿ ಗಾಯವಾಗಿದ್ದು ಪಶುವೈದ್ಯೆ ಪೂಜಾ ಚಿಕಿತ್ಸೆ ನೀಡಿದ್ದಾರೆ.ಬಳಿಕ ನಾಗರ ಹಾವನ್ನು ಸುರಕ್ಷಿತವಾಗಿ ಚಾರ್ಮಾಡಿ ಘಾಟ್ ಅರಣ್ಯಕ್ಕೆ ಬಿಡಲಾಯಿತು. ಈ ಸಂದರ್ಭದಲ್ಲಿ ಪಶು ಆರೋಗ್ಯ ಸಹಾಯಕ ಪ್ರದೀಪ್ ರಾಜ್ ಇದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ