ಮುಸ್ಲಿಮ್ ಸರ್ಕಾರಿ ನೌಕರರಿಗೆ ರಂಝಾನ್ ಉಪವಾಸ ತೊರೆಯಲು 1 ಗಂಟೆ ವಿನಾಯಿತಿ ನೀಡಲು ಸಿಎಂಗೆ ಮನವಿ - Mahanayaka
10:57 AM Friday 21 - February 2025

ಮುಸ್ಲಿಮ್ ಸರ್ಕಾರಿ ನೌಕರರಿಗೆ ರಂಝಾನ್ ಉಪವಾಸ ತೊರೆಯಲು 1 ಗಂಟೆ ವಿನಾಯಿತಿ ನೀಡಲು ಸಿಎಂಗೆ ಮನವಿ

siddaramaiah
21/02/2025

ಬೆಂಗಳೂರು: ರಂಝಾನ್ ತಿಂಗಳಲ್ಲಿ ಉಪವಾಸ ತೊರೆಯಲು ಮುಸ್ಲಿಮ್ ಸರ್ಕಾರಿ ನೌಕರರಿಗೆ ಕೆಲಸದ ಸಮಯದಲ್ಲಿ ವಿನಾಯಿತಿ ನೀಡುವಂತೆ ಸಿಎಂ ಸಿದ್ದರಾಮಯ್ಯನವರಿಗೆ ಕೆಪಿಸಿಸಿ ಉಪಾಧ್ಯಕ್ಷ ಸೈಯದ್ ಅಹ್ಮದ್ ಹಾಗೂ ನಜೀರ್ ಅಹ್ಮದ್ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಈಗಾಗಲೇ ರಂಝಾನ್ ಉಪವಾಸ ತೊರೆಯಲು ಮುಸ್ಲಿಮ್ ನೌಕರರಿಗೆ ಕೆಲಸದ ಅವಧಿಯಲ್ಲಿ ವಿನಾಯಿತಿ ನೀಡಲಾಗಿದೆ. ರಾಜ್ಯದಲ್ಲಿ ಕೂಡ ವಿನಾಯಿತಿ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ.

ಕರ್ನಾಟಕದಲ್ಲಿ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ನೌಕರರಿಗೆ ಸಂಜೆ 4 ಗಂಟೆಯ ನಂತರ ಉಪವಾಸ ಬಿಡಲು ಅನುಮತಿ ನೀಡುವಂತೆ ಸಿಎಂ ಅವರಿಗೆ ಮನವಿ ಸಲ್ಲಿಸಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/HEkqDgrW2BlJLad5kZ1DX7

ಇತ್ತೀಚಿನ ಸುದ್ದಿ