ಸಾಧುವಿನ ಭೀಕರ ಹತ್ಯೆ: ಕಾರಣ ಕೇಳಿದ್ರೆ ಶಾಕ್ ಆಗ್ತೀರಿ! - Mahanayaka
5:12 PM Friday 20 - September 2024

ಸಾಧುವಿನ ಭೀಕರ ಹತ್ಯೆ: ಕಾರಣ ಕೇಳಿದ್ರೆ ಶಾಕ್ ಆಗ್ತೀರಿ!

sadhu
04/04/2021

ಲಕ್ನೋ: ಸಾಧುವೊಬ್ಬನನ್ನು ಕಲ್ಲಿನೊಂದ ಜಜ್ಜಿ ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದ್ದು, ಅಯೋಧ್ಯೆಯ ಪ್ರಸಿದ್ಧ ಹನುಮಾನ್‌ಗಿರಿ ದೇವಾಲಯದಲ್ಲಿ ಈ ಸಾಧು ವಾಸವಿದ್ದರು ಎಂದು ತಿಳಿದು ಬಂದಿದೆ.

ಮಹಾಂತ ಕನ್ಹಯ್ಯಾ ದಾಸ್ ಎಂಬ ಸಾಧು ಹತ್ಯೆಗೀಡಾದ ಸಾಧುವಾಗಿದ್ದಾರೆ. ಭಾನುವಾರ ಮುಂಜಾನೆ ದೇವಾಲಯದಲ್ಲಿ ಸಾಧು ಮಹಾಂತ ಅವರ ದೇಹವು ಪತ್ತೆಯಾಗಿದೆ. ಈ ಹತ್ಯೆಗೆ ಸಂಬಂಧಿಸಿದಂತೆ ಕನ್ಹಯ್ಯಾ ದಾಸ್ ಅವರ ‘ಗುರು ಭಾಯ್’ ಆಗಿರುವ ಗೋಲು ದಾಸ್ ಎಂಬುವರನ್ನು ಬಂಧಿಸಲಾಗಿದೆ.

 ಗೋಲು ದಾಸ್ ಮತ್ತು ಕನ್ಹಯ್ಯಾ ದಾಸ್ ಅವರ ನಡುವೆ ಅಯೋಧ್ಯೆಯಲ್ಲಿರುವ ಸ್ವಲ್ಪ ಜಮೀನು ಮತ್ತು ಮನೆಯೊಂದಕ್ಕೆ ಸಂಬಂಧಿಸಿದಂತೆ ವೈಷಮ್ಯವಿತ್ತು ಈ ಕಾರಣಕ್ಕಾಗಿ ಹತ್ಯೆ ನಡೆದಿದೆ ಎಂದು ಹೇಳಲಾಗಿದೆ.


Provided by

ಕನ್ಹಯ್ಯಾ ದಾಸ್ ಅವರ ಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆಯೇ ನಾಗಾ ಸಾಧುಗಳ ದೊಡ್ಡ ಗುಂಪೊಂದು ಆಶ್ರಮಕ್ಕೆ ಭೇಟಿ ನೀಡಿತು. ‘ನಾಗಾ ಸಾಧು’ ಆಗಿದ್ದ ಕನ್ಹಯ್ಯಾ ದಾಸ್ ಅವರ ಹತ್ಯೆಯ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ನಾಗಾ ಸಾಧುಗಳ ಗುಂಪು ಒತ್ತಾಯಿಸಿದೆ.

ಇತ್ತೀಚಿನ ಸುದ್ದಿ