ಬೆಳ್ಳಂಬೆಳಗ್ಗೆ ದೆಹಲಿ ಮೀರತ್ ಎಕ್ಸ್‌ಪ್ರೆಸ್‌ವೇನಲ್ಲಿ ಶಾಲಾ ಬಸ್ ಮತ್ತು ಕಾರು ಅಪಘಾತ: ಆರು ಮಂದಿ ಸಾವು - Mahanayaka
3:14 AM Friday 20 - September 2024

ಬೆಳ್ಳಂಬೆಳಗ್ಗೆ ದೆಹಲಿ ಮೀರತ್ ಎಕ್ಸ್‌ಪ್ರೆಸ್‌ವೇನಲ್ಲಿ ಶಾಲಾ ಬಸ್ ಮತ್ತು ಕಾರು ಅಪಘಾತ: ಆರು ಮಂದಿ ಸಾವು

11/07/2023

ದೆಹಲಿ ಮೀರತ್ ಎಕ್ಸ್ ಪ್ರೆಸ್ ವೇನಲ್ಲಿ ಮಂಗಳವಾರ ಬೆಳಿಗ್ಗೆ ಶಾಲಾ ಬಸ್ ಮತ್ತು ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಾಲಾ ಬಸ್ ಖಾಲಿಯಾಗಿತ್ತು ಮತ್ತು ವಿರುದ್ಧ ದಿಕ್ಕಿನಿಂದ ಬರುತ್ತಿತ್ತು ಎಂದು ವರದಿಯಾಗಿದೆ. ದೆಹಲಿ ಮೀರತ್ ಎಕ್ಸ್ ಪ್ರೆಸ್ ವೇನಲ್ಲಿ ಇಂದು ಬೆಳಿಗ್ಗೆ 6ಗಂಟೆಗೆ ಶಾಲಾ ಬಸ್ ಮತ್ತು ಕಾರು ಅಪಘಾತಕ್ಕೀಡಾಗಿದೆ. ಗಾಜಿಪುರ ಬಳಿ ದೆಹಲಿಯಿಂದ ಸಿಎನ್ ಜಿ ತುಂಬಿದ ನಂತರ ಬಸ್ ಚಾಲಕ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ. ಕಾರು ಮೀರತ್ ನಿಂದ ಬರುತ್ತಿತ್ತು. ಈ ಕಾರು ಗುರಗಾಂವ್ ಗೆ ಹೋಗಬೇಕಾಗಿತ್ತು. ಇದೇ ವೇಳೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ.

ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸ್ ಚಾಲಕನನ್ನು ಬಂಧಿಸಲಾಗಿದೆ. ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬಸ್ ಚಾಲಕನ ಸಂಪೂರ್ಣ ತಪ್ಪುಎಂದು ಸಂಚಾರ ಪೊಲೀಸ್ ಎಡಿಸಿಪಿ ರಮಾನಂದ ಕುಶ್ವಾಹ ಎಎನ್ಐಗೆ ತಿಳಿಸಿದ್ದಾರೆ.


Provided by

ಮೃತರಲ್ಲಿ ಇಬ್ಬರು ಮಕ್ಕಳು ಸೇರಿದ್ದಾರೆ. ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕಾರಿನಲ್ಲಿ 8 ಮಂದಿ ಇದ್ದರು. ಈ ಬಸ್ ನೋಯ್ಡಾದಲ್ಲಿರುವ ಬಾಲ ಭಾರತಿ ಸ್ಕೂಲ್ ಬಸ್ ಗೆ ಸೇರಿದೆ ಎಂದು ಎಡಿಸಿಪಿ ಕುಶ್ವಾಹ ತಿಳಿಸಿದ್ದಾರೆ.

ಸೋಮವಾರ ಕೂಡಾ ಪ್ರತಾಪ್ ಗಢದಲ್ಲಿ ಅತಿ ವೇಗದಲ್ಲಿ ಬರುತ್ತಿದ್ದ ಟ್ಯಾಂಕರ್ ವೊಂದು ಟೆಂಪೊಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರತಾಪ್ ಗಢದ ಲೀಲಾಪುರ್ ಪೊಲೀಸ್ ಠಾಣೆ ಪ್ರದೇಶದ ಮೋಹನ್ ಗಂಜ್ ಮಾರುಕಟ್ಟೆ ಬಳಿಯ ಲಕ್ನೋ ವಾರಣಾಸಿ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿತ್ತು.

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ