ಸಿನಿಮೀಯ ಶೈಲಿಯಲ್ಲಿ ಇಂಜಿನಿಯರ್ ಅಪಹರಣ ಪ್ರಕರಣ: ಮೂರು ಗಂಟೆಯಲ್ಲೇ 6 ಮಂದಿಯ ಬಂಧನ - Mahanayaka
8:24 AM Saturday 21 - September 2024

ಸಿನಿಮೀಯ ಶೈಲಿಯಲ್ಲಿ ಇಂಜಿನಿಯರ್ ಅಪಹರಣ ಪ್ರಕರಣ: ಮೂರು ಗಂಟೆಯಲ್ಲೇ 6 ಮಂದಿಯ ಬಂಧನ

police
03/02/2022

ಬೆಂಗಳೂರು: ಬೆಂಗಳೂರಿನ ಯಲಹಂಕದ ರೈತರ ಸಂತೆಯ ಬಳಿ ಇಂಜಿನಿಯರ್ ಒಬ್ಬರನ್ನು ಅಪಹರಿಸಿದ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೆಲಸ ಮಾಡಿಸಿಕೊಂಡು ಹಣ ಕೊಟ್ಟಿಲ್ಲವೆಂದು ಇಂಜಿನಿಯರ್​​ನನ್ನು ಅಪಹರಿಸಿದ್ದ ಆರು ಮಂದಿ‌ ಅಪಹರಣಕಾರರನ್ನು ಮೂರು ಗಂಟೆಯಲ್ಲೇ ಯಲಹಂಕ ಪೊಲೀಸರು ಬಂಧಿಸಿದ್ದಾರೆ‌. ಒಡಿಶಾ ಮೂಲದ ಸಿವಿಲ್ ಇಂಜಿನಿಯರ್ ಆಗಿದ್ದ ಮಾನಸ್ ಎಂಬಾತನನ್ನು ಕಿಡ್ನಾಪ್ ಮಾಡಿದ್ದ ಆರೋಪದಡಿ ನಂದ, ಸುನಿಲ್ ಸೇರಿದಂತೆ ಆರು ಮಂದಿ ಆರೋಪಿಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ‌.

ಕಟ್ಟಡ ಕಾಂಟ್ರಾಕ್ಟರ್ ಹಾಗೂ ಸಿವಿಲ್ ಇಂಜಿನಿಯರ್ ಆಗಿದ್ದ ಮಾನಸ್ ​ಗೆ ಕಳೆದ ವರ್ಷ ಫೆಬ್ರವರಿಯಲ್ಲಿ ನಂದ ಮತ್ತು ಟೀಂ ಪರಿಚಯವಾಗಿತ್ತು. ಇವರು ಪರಸ್ಪರ ಮಾತನಾಡಿಕೊಂಡು ನಗರದಲ್ಲೆಡೆ ಕಟ್ಟಡ ನಿರ್ಮಾಣ ಕೆಲಸಗಳ ಗುತ್ತಿಗೆ ಪಡೆದು ಒಟ್ಟಿಗೆ ಕೆಲಸ ಮಾಡುತ್ತಿದ್ದರು‌.ಅದೇ ರೀತಿ ಆರೋಪಿಗಳು ಕೆಲಸಕ್ಕಾಗಿ ಜೆಸಿಬಿ ಹಾಗೂ‌ ಇಟಾಚಿ ಬಾಡಿಗೆಗೆ ಪಡೆದಿದ್ದರು.


Provided by

ಇತ್ತೀಚೆಗೆ ಬಾಣಸವಾಡಿಯಲ್ಲಿ ಕೈಗೆತ್ತಿಕೊಂಡಿದ್ದ ಪ್ರಾಜೆಕ್ಟ್ ವಿಚಾರದಲ್ಲಿ ನಂದ ಹಾಗೂ ಮಾನಸ್ ನಡುವೆ ಹಣಕಾಸಿನ ವೈಮನಸ್ಸು ಉಂಟಾಗಿತ್ತು. ಕೆಲಸ ಮಾಡಿದ್ದಕ್ಕಾಗಿ 30 ಲಕ್ಷ ರೂ. ಕೇಳಲು ಹೋದ ಆರೋಪಿಗಳಿಗೆ ನೀವೂ ಸರಿಯಾಗಿ ಕೆಲಸ‌ ಮಾಡಿಲ್ಲ, ಅದೇ ಕೆಲಸವನ್ನ ಬೇರೆಯವರಿಂದ ಮಾಡಿಸಿದ್ದೇನೆ ಎಂದು ಹೇಳಿ ಮಾನಸ್ ಹಣ ಕೊಡಲು ನಿರಾಕರಿಸಿದ್ದಾನೆ ಎನ್ನಲಾಗಿದೆ.

ಇದರಿಂದ ಅಕ್ರೋಶಗೊಂಡ ನಂದ ಹಾಗೂ ಆತನ ಸಹಚರರು ಮಾನಸ್ ಅಪಹರಣಕ್ಕೆ ಸ್ಕೆಚ್ ಹಾಕಿದ್ದಾರೆ‌. ನಿನ್ನೆ ಬೆಳಗ್ಗೆ ಯಲಹಂಕದ ರೈತರ ಸಂತೆ ಬಳಿ ಆರು ಮಂದಿ ಆರೋಪಿಗಳು ಮಾನಸ್ ​ನನ್ನ ಸ್ಕಾರ್ಪಿಯೋ ಕಾರಿನಲ್ಲಿ ಕಿಡ್ನಾಪ್ ಮಾಡಿದ್ದಾರೆ.

ಅಪಹರಣ ವೇಳೆ ಮಾನಸ್​ ಜೊತೆಗಿದ್ದ ಯುವತಿ ಕೂಡಲೇ ಯಲಹಂಕ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ತಕ್ಷಣ ಕಾರ್ಯಪ್ರವೃತರಾದ ಇನ್ಸ್​ಪೆಕ್ಟರ್​ ಸತ್ಯನಾರಾಯಣ್ ಹಾಗೂ ಪಿಎಸ್ಐ ಶೈಲಜಾ ನೇತೃತ್ವದ ತಂಡ ಆರೋಪಿಗಳ ಮೊಬೈಲ್  ನೆಟ್​ ವರ್ಕ್ ಟ್ರೇಸ್ ಮಾಡಿ, ಅಪಹರಿಸಿದ‌ ಮೂರು ಗಂಟೆಗಳಲ್ಲೇ ಆರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಐಷಾರಾಮಿ ಕಾರು ಬಾಡಿಗೆ ಪಡೆದು ಅಡವಿಡುತ್ತಿದ್ದ 7 ಮಂದಿಯ ಸೆರೆ

ಹಿಜಬ್ ಧರಿಸಿದ್ದ ವಿದ್ಯಾರ್ಥಿನಿಯರನ್ನು ಕಾಲೇಜು ಗೇಟ್‍ ನಲ್ಲೇ ತಡೆದ ಪ್ರಾಂಶುಪಾಲರು

ಹುಲ್ಲು ತರಲು ಹೋಗಿದ್ದ ವೇಳೆ ಕಾಡಾನೆ ದಾಳಿ: ವ್ಯಕ್ತಿಯ ದಾರುಣ ಸಾವು

ಪುನೀತ್ ರಾಜ್ ಕುಮಾರ್ ಮನೆಗೆ ಭೇಟಿ ನೀಡಲಿರುವ ಅಲ್ಲು ಅರ್ಜುನ್: ಅಂದೇಕೆ ಭೇಟಿ ನೀಡಿರಲಿಲ್ಲ ಗೊತ್ತಾ?

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್:  ಮಾದರಿ ಪ್ರಶ್ನೆ ಪತ್ರಿಕೆ ಪ್ರಕಟ

 

ಇತ್ತೀಚಿನ ಸುದ್ದಿ