ಸೊಸೆಯನ್ನು ಕೆಂಡದ ಮೇಲೆ ನಡೆಸಿದ ಅತ್ತೆ! | ಅತ್ತೆಯ ಅಮಾನವೀಯ ಕೃತ್ಯಕ್ಕೆ ಸೊಸೆ ಹೇಳಿದ್ದೇನು ಗೊತ್ತೇ? - Mahanayaka
10:30 PM Monday 16 - September 2024

ಸೊಸೆಯನ್ನು ಕೆಂಡದ ಮೇಲೆ ನಡೆಸಿದ ಅತ್ತೆ! | ಅತ್ತೆಯ ಅಮಾನವೀಯ ಕೃತ್ಯಕ್ಕೆ ಸೊಸೆ ಹೇಳಿದ್ದೇನು ಗೊತ್ತೇ?

bhoopal crime news
24/08/2021

ಭೋಪಾಲ್: ಚಿತ್ರ ವಿಚಿತ್ರ ಘಟನೆಗಳಿಗೆ ಭೋಪಾಲ್ ಸದಾ ಸುದ್ದಿಯಾಗುತ್ತಿರುತ್ತದೆ. ಇದೀಗ ಸೀತೆಯನ್ನು ಅಗ್ನಿಪರೀಕ್ಷೆಗೊಳಪಡಿಸಿದಂತೆಯೇ ಅತ್ತೆಯೋರ್ವಳು ತನ್ನ ಸೊಸೆಯನ್ನು ಕೆಂಡದ ಮೇಲೆ ನಡೆಸಿದ ಅಮಾನವೀಯ ಘಟನೆ ಮಧ್ಯಪ್ರದೇಶದ ಛಿಂದ್ವಾಡದ ಮಾವೋ ವ್ಯಾಪ್ತಿಯ ರಾಮಾಕೋನಾ ಗ್ರಾಮದಲ್ಲಿ  ನಡೆದಿದೆ.

ಆಗಸ್ಟ್ 17ರಂದು ಅತ್ತೆಯು ತನ್ನ ಸೊಸೆಯನ್ನು ಬಾಬಾವೊಬ್ಬನ ಬಳಿಗೆ ಕರೆದುಕೊಂಡು ಹೋಗಿದ್ದಾಳೆ. ಈ ವೇಳೆ ಬಾಬಾ, ಸೊಸೆಯ ಮೇಲೆ ಗಂಭೀರವಾದ ಆರೋಪ ಮಾಡಿದ್ದು, ನಿನ್ನ ಸೊಸೆಯು, ನಿನ್ನ ಮಗನ ಆಹಾರಕ್ಕೆ ಭಸ್ಮ ಸೇರಿಸಿ ಆತನನ್ನು ವಶೀಕರಣ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿದ್ದಾನೆ.

ಈ ವೇಳೆ ಸೊಸೆಯು ತಾನು ಆ ರೀತಿ ಮಾಡಿಲ್ಲ ಎಂದು ಹೇಳಿದರೂ ಆತ ಒಪ್ಪಲಿಲ್ಲ, ಜೊತೆಗೆ ತನ್ನ ಮಾತನ್ನು ಸತ್ಯ ಎಂದು ನಂಬಿಸಲು ಸೊಸೆಯನ್ನು ಅಗ್ನಿಪ್ರವೇಶ ಮಾಡಿಸು, ಆಕೆಗೆ ಏನೂ ಆಗದಿದ್ದರೆ. ಆಕೆ ತಪ್ಪು ಮಾಡಿಲ್ಲ ಎಂದರ್ಥ ಎಂದು ಹೇಳಿದ್ದಾನೆನ್ನಲಾಗಿದೆ.


Provided by

ಮೂಢನಂಬಿಕೆಯನ್ನು ನಂಬುತ್ತಿದ್ದ ಅತ್ತೆ ಬಾಬಾನ ಮಾತನ್ನು ಕೇಳಿ ತನ್ನ ಸೊಸೆಯನ್ನು ಕೆಂಡದ ಮೇಲೆ ನಡೆಸಿ, ಪರೀಕ್ಷಿಸಿದ್ದಾಳೆ. ಇದರಿಂದಾಗಿ ಸೊಸೆಯ ಕಾಲಿಗೆ ತೀವ್ರವಾದ ಸುಟ್ಟ ಗಾಯಗಳಾಗಿವೆ. ಇನ್ನೂ ಅತ್ತೆಯು, ಸೊಸೆ ತನ್ನ ಮಗನನ್ನು ವಶೀಕರಣ ಮಾಡಿಕೊಂಡಿದ್ದಾಳೆ ಎಂದು ಮೊದಲೇ ಅನುಮಾನ ವ್ಯಕ್ತಪಡಿಸುತ್ತಿದ್ದಳು. ಬಾಬಾನ ಬಳಿಗೆ ಹೋದಾಗಲೂ ಮೊದಲು ಬಾಬಾನ ಕಿವಿಯಲ್ಲಿ ಇದೇ ವಿಚಾರವನ್ನು ಊದಿದ್ದಳು ಎಂದು ಸೊಸೆ ಆರೋಪಿಸಿದ್ದಾಳೆ.

ಸದ್ಯ ಸೊಸೆಯ ಪ್ರಾಣಕ್ಕೆ ಯಾವುದೇ ಅಪಾಯವಾಗಿಲ್ಲ. ಇನ್ನು ಸಂತ್ರಸ್ತ ಮಹಿಳೆಯ ಪತಿ ಕೂಡ ತನ್ನ ತಾಯಿಯ ವರ್ತನೆಗೆ ಬೇಸರ ವ್ಯಕ್ತಪಡಿಸಿದ್ದಾನೆನ್ನಲಾಗಿದೆ. ಪತಿಯು ತನ್ನ ಪತ್ನಿಯನ್ನು ಹೆಚ್ಚಾಗಿ ಪ್ರೀತಿಸುತ್ತಿದ್ದರೆ, ಅದು ವಶೀಕರಣ ಎಂದೇ ಹಿಂದಿನ ಕಾಲದವರು ಹೇಳುತ್ತಾರೆ. ಹಾಗಾಗಿಯೇ ಭಾರತದಲ್ಲಿ ಪತಿ-ಪತ್ನಿಯರ ಪ್ರೈವಸಿಗೆ ಬಹಳಷ್ಟು ಮನೆಗಳಲ್ಲಿ ಅವಕಾಶವೇ ಇರುವುದಿಲ್ಲ.

ಇನ್ನಷ್ಟು ಸುದ್ದಿಗಳು…

 

ತಾಲಿಬಾನ್ ನ 10ಕ್ಕೂ ಅಧಿಕ ಉಗ್ರರಿಗೆ ಚಟ್ಟಕಟ್ಟಿದ ಅಫ್ಘಾನ್ ನ ಪಂಜ್ ಶೇರ್ ಚಳುವಳಿಗಾರರು

ಕಾಂಗ್ರೆಸ್ ನ ಫ್ಯೂಸ್ ಕಿತ್ತಾಕ್ಬಿಟ್ಟಿದ್ದೀವಿ ಹೇಗೆ ಶಾಕ್ ನೀಡ್ತಾರೆ ನೋಡೋಣ: ಕುಮಾರಸ್ವಾಮಿ ಡೈಲಾಗ್ ವೈರಲ್

ಆಟೋ ಚಾಲಕನಿಗೆ ಪೊಲೀಸರ ಎದುರೇ ಚಪ್ಪಲಿಯಿಂದ ಹೊಡೆದ ಮಹಿಳೆ | ಆಟೋ ಚಾಲಕ ಮಾಡಿದ್ದೇನು ಗೊತ್ತಾ?

ಪಿಸ್ತೂಲ್ ಸ್ವಚ್ಛಗೊಳಿಸುತ್ತಿರುವ ವೇಳೆ ಹಾರಿದ ಗುಂಡು | ಕಾನ್ಟ್ಟೇಬಲ್ ದಾರುಣ ಸಾವು

ಆಟೋ ಚಾಲಕನಿಗೆ ಪೊಲೀಸರ ಎದುರೇ ಚಪ್ಪಲಿಯಿಂದ ಹೊಡೆದ ಮಹಿಳೆ | ಆಟೋ ಚಾಲಕ ಮಾಡಿದ್ದೇನು ಗೊತ್ತಾ?

 

 

ಇತ್ತೀಚಿನ ಸುದ್ದಿ