ಶ್ರೀಗಂಧ ಬೆಳೆಗಾರರಿಂದ ಅರೆಬೆತ್ತಲೆ ಪ್ರತಿಭಟನೆ

srigandha
27/03/2022

ಚಿಕ್ಕಮಗಳೂರು: ತರೀಕೆರೆ ತಾಲೂಕಿನ ಹಳಿಯೂರು ಗ್ರಾಮದಲ್ಲಿ ಸೂಕ್ತ ಪರಿಹಾರಕ್ಕಾಗಿ ಆಗ್ರಹಿಸಿ ಶ್ರೀಗಂಧ ಬೆಳೆಗಾರರ ಹೋರಾಟ ಇಂದಿಗೆ 27ನೇ ದಿನಕ್ಕೆ ಮುಂದುವರಿದಿದೆ.

ಹೋರಾಟಗಾರರು ಅರೆಬೆತ್ತಲೆ ಪ್ರತಿಭಟನೆ ನಡೆಸುತ್ತಿದ್ದಾರೆ. ಕೋರ್ಟ್ ಸೂಚಿಸಿರುವ ಪರಿಹಾರ ನೀಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದು, ಹೈಕೋರ್ಟ್ ನಿಗದಿಪಡಿಸಿರುವ ಪರಿಹಾರ ನೀಡುವಂತೆ ರೈತರರು ಪಟ್ಟು ಹಿಡಿದಿದ್ದಾರೆ.

ಧರಣಿಯಲ್ಲಿ ಪುರುಷರು ಹಾಗೂ ಮಕ್ಕಳು ಶರ್ಟ್ ಕಳಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ 27 ದಿನಗಳಿಂದ 22 ರೈತ ಕುಟುಂಬಗಳು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದು, ಪೋಷಕರಿಗೆ ಬೆಂಬಲ ಸೂಚಿಸಿ ಮಕ್ಕಳೂ ಭಾಗಿಯಾಗಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಚಾರ್ಜಿಂಗ್ ವೇಳೆ ಎಲೆಕ್ಟ್ರಿಕ್ ಬೈಕ್ ಸ್ಫೋಟ: ತಂದೆ, ಮಗಳ ದುರಂತ ಸಾವು

ಎಷ್ಟು ವಯಸ್ಸಿನವರು ಎಷ್ಟು ಹೊತ್ತು ನಿದ್ರಿಸಬೇಕು? | ತಜ್ಞರು ಏನಂತಾರೆ ನೋಡಿ…

ಮನೆಗೆ ಬೆಂಕಿಯಿಟ್ಟು 8 ಮಂದಿಯ ಹತ್ಯೆ ಪ್ರಕರಣ: 21 ಆರೋಪಿಗಳ ಬಂಧನ |  ತನಿಖೆ ಆರಂಭಿಸಿದ ಸಿಬಿಐ

ಮಗಳ ಮೃತದೇಹವನ್ನು ಹೊತ್ತು 10 ಕಿ.ಮೀ. ನಡೆದ ತಂದೆ

ಇತ್ತೀಚಿನ ಸುದ್ದಿ

Exit mobile version