ಚಟ್ನಿ ರುಚಿಕರವಾಗಿ ತಯಾರಿಸಿಲ್ಲ ಎಂದು ಪತ್ನಿಯನ್ನು ಹೊಡೆದುಕೊಂದ ಪತಿ! - Mahanayaka
10:43 PM Tuesday 16 - September 2025

ಚಟ್ನಿ ರುಚಿಕರವಾಗಿ ತಯಾರಿಸಿಲ್ಲ ಎಂದು ಪತ್ನಿಯನ್ನು ಹೊಡೆದುಕೊಂದ ಪತಿ!

chutney
03/08/2021

ಮಧ್ಯಪ್ರದೇಶ: ಪತ್ನಿ ತಯಾರಿಸಿದ ಚಟ್ನಿ ರುಚಿಕರವಾಗಿಲ್ಲ ಎಂದು ಪತಿಯೋರ್ವ ಆಕೆಯನ್ನು ಥಳಿಸಿ ಹತ್ಯೆ ಮಾಡಿದ ಘಟನೆ ಮಧ್ಯಪ್ರದೇಶದ ದಾಟಿಯಾದಲ್ಲಿ ನಡೆದಿದ್ದು, ಪತ್ನಿಯನ್ನು ಹತ್ನೆ ಮಾಡಿದ ಬಳಿಕ ಆರೋಪಿ ಪತಿ ಸ್ಥಳದಿಂದ ಪರಾರಿಯಾಗಿದ್ದಾನೆ.


Provided by

ಇಲ್ಲಿನ ಗೋರಘಾಟ್ ಪೊಲೀಸ್ ಠಾಣೆ ವ್ಯಾಪ್ತಿಯ ಉಪರಾಯಗಾಂವ್ ನಲ್ಲಿ ಈ ಘಟನೆ ನಡೆದಿದ್ದು, ಉಪರಾಯನಗಾಂವ್ ನ ಸ್ಥಳೀಯ ವ್ಯಕ್ತಿ ಆನಂದ್ ಗುಪ್ತಾ ಸಮೋಸ ಕಚೋರಿ ಅಂಗಡಿಯನ್ನು ನಡೆಸುತ್ತಿದ್ದರು. ಈ ಅಂಗಡಿಗೆ ಪ್ರತಿ ದಿನ ಅವರ ಪತ್ನಿ ಪ್ರೀತಿ ತಮ್ಮ ಮನೆಯಲ್ಲಿಯೇ ಚಟ್ನಿ ತಯಾರಿಸಿ ಕೊಡುತ್ತಿದ್ದರು.

ಈ ಬಾರಿ ಚಟ್ನಿ ಚೆನ್ನಾಗಿರಲಿಲ್ಲ ಎಂದು ಆರೋಪಿಸಿದ ಆನಂದ್ ಗುಪ್ತಾ, ಚಟ್ನಿ ತಯಾರಿಸುವುದು ಹಾಗೆ ಅಲ್ಲ ಎಂದು ಪತ್ನಿಗೆ ಸಲಹೆ ನೀಡಲು ಹೋಗಿದ್ದಾನೆ. ಆದರೆ, ಇದು ಜಗಳವಾಗಿ ಪರಿವರ್ತನೆಯಾಗಿದ್ದು, ತೀವ್ರ ಮಾತಿನ ಚಕಮಕಿಯ ಬಳಿಕ ಬಳಿಕ ಗಂಡ-ಹೆಂಡತಿಯ ನಡುವೆ ಪರಸ್ಪರ ಹಲ್ಲೆ ನಡೆದಿದ್ದು, ಈ ವೇಳೆ ಆನಂದ ಗುಪ್ತಾ ತನ್ನ ಪತ್ನಿ ಪ್ರೀತಿಗೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಆನಂದನ ತಾಯಿ ಮಗನನ್ನು ತಡೆದರೂ ಆತ ತೀವ್ರ ಕೋಪಗೊಂಡಿದ್ದರಿಂದ ಪತ್ನಿಯನ್ನು ಮುಗಿಸಿಯೇ ಬಿಟ್ಟಿದ್ದಾನೆ.

ಪತ್ನಿಯನ್ನು ಹತ್ಯೆ ಮಾಡಿದ ಬಳಿಕ ಆತ ಸ್ಥಳದಿಂದ ಪರಾರಿಯಾಗಿದ್ದು, ಈ ವೇಳೆ ಸ್ಥಳೀಯರು ಗೋರ್ಗಾಟ್ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಿದ್ದು, ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆರೋಪಿಯು ತನ್ನ ಪತ್ನಿಯ ತಲೆ ಹಾಗೂ ಕುತ್ತಿಗೆಗೆ ದೊಣ್ಣೆಯಿಂದ ಹೊಡೆದಿರುವುದು ಕಂಡು ಬಂದಿದೆ.

ಇನ್ನೂ ಕೇವಲ ಚಟ್ನಿಯ ವಿಚಾರಕ್ಕೆ ಸಂಬಂಧಿಸಿದಂತೆ ಕೊಲೆಯಾಗಿರುವುದು ಇದೀಗ ಎಲ್ಲರನ್ನೂ ಅಚ್ಚರಿಗೀಡು ಮಾಡಿದೆ. ಕೋಪದ ಸಂದರ್ಭದಲ್ಲಿ ಚಿಕ್ಕ ವಿಚಾರಗಳು ಕೂಡ ದೊಡ್ಡದಾಗಿಯೇ ಕಾಣುತ್ತದೆ ಎನ್ನುವುದಕ್ಕೆ ಈ ಘಟನೆಯೇ ನಿದರ್ಶನ ಎನ್ನುವಂತಾಗಿದೆ. ಇನ್ನೂ ಈ ಕೃತ್ಯ ಬಳಿಕ ತಪ್ಪಿಸಿಕೊಂಡಿರುವ ಆನಂದನನ್ನು ಪೊಲೀಸರು ಹುಡುಕಾಡುತ್ತಿದ್ದಾರೆ.

ಇತ್ತೀಚಿನ ಸುದ್ದಿ