ನಾಳೆ ರಾಹುಲ್ ಗಾಂಧಿ ಉಡುಪಿಗೆ ಆಗಮನ: ಮೀನುಗಾರರ ಜೊತೆ ಸಂವಾದ,ರೋಡ್ ಶೋ.. - Mahanayaka

ನಾಳೆ ರಾಹುಲ್ ಗಾಂಧಿ ಉಡುಪಿಗೆ ಆಗಮನ: ಮೀನುಗಾರರ ಜೊತೆ ಸಂವಾದ,ರೋಡ್ ಶೋ..

udupi
26/04/2023

ಉಡುಪಿ: ನಾಳೆ ರಾಹುಲ್ ಗಾಂಧಿ ಕಾಪು ಕ್ಷೇತ್ರದ ಉಚ್ಛಿಲಕ್ಕೆ ಆಗಮಿಸಲಿದ್ದು ಉಚ್ಛಿಲ ಮಹಾಲಕ್ಷ್ಮಿ ದೇವಸ್ಥಾನದ ಶಾಲಿನಿ ಜಿ. ಶಂಕರ್ ಸಭಾಂಗಣದಲ್ಲಿ ನಡಯೋ ಮೀನುಗಾರರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.


Provided by

ಕಾಪು ರಾಜೀವ ಭವನದಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು ನಾಳೆ ಮಧ್ಯಾಹ್ನ 3-40 ಕ್ಕೆ ಕಾಪು ಕ್ಷೇತ್ರಕ್ಕೆ ಆಗಮಿಸಲಿರುವ ರಾಹುಲ್ ಗಾಂಧಿಯವರು ಕಟಪಾಡಿಯಲ್ಲಿ ಮತ್ತು ಉಚ್ಛಿಲದಲ್ಲಿ ನಡೆಯೋ ರೋಡ್ ಶೋನಲ್ಲಿ ಭಾಗವಹಿಸಲಿದ್ದು ನಂತರ ಉಚ್ಛಿಲ ಮಹಾಲಕ್ಷ್ಮಿ ದೇವಸ್ಥಾನದ ಶಾಲಿನಿ ಜಿ. ಶಂಕರ್ ಸಭಾಂಗಣದಲ್ಲಿ ನಡೆಯುವ ಮೀನುಗಾರರ ಜೊತೆ ಸಂವಾದದಲ್ಲಿ ಭಾಗವಹಿಸಿ ಮೀನುಗಾರರ ಸಮುದಾಯದ ಕಷ್ಟ ನಷ್ಟಗಳ ಬಗ್ಗೆ ಆಲಿಸಲಿದ್ದಾರೆ ಎಂದು ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.

ಮೀನುಗಾರರ ಸಮುದಾಯದ ವ್ರತ್ತಿಗೆ ಅನುಗುಣವಾಗಿ ಯಾವುದೇ ರೀತಿಯ ಸ್ಪಂದಿಸೋ ಕೆಲಸ ಬಿಜೆಪಿ ಸರ್ಕಾರ ಮಾಡಿಲ್ಲ.ಕಾಂಗ್ರೆಸ್ ಸರ್ಕಾರ ನಿರಂತರವಾಗಿ ಮೀನುಗಾರರಿಗೆ ಸೀಮೆಯೆಣ್ಣೆ ಸಬ್ಸಿಡಿ ಕೊಡುವ ಕೆಲಸ ಮಾಡಿತ್ತು. ಕಳೆದ 6 ತಿಂಗಳಿಂದ ಸೀಮಯೆಣ್ಣೆ ಸಬ್ಸಿಡಿ ಸಿಗದೇ ಮೀನುಗಾರರು ಕಂಗಲಾಗಿದ್ದಾರೆ. ಕೇವಲ ವೋಟ್ ಬ್ಯಾಂಕ್ ಆಗಿ ಸುಳ್ಳುಗಳ ಸರಮಾಲೆಯನ್ನು ಸೃಷ್ಟಿಸಿ ಮೀನುಗಾರ ಸಮುದಾಯವನ್ನು ಹತ್ತಿಕೋ ಕೆಲಸವನ್ನು ಬಿಜೆಪಿ ಸರ್ಕಾರ ನಿರಂತರವಾಗಿ ಮಾಡುತ್ತಾ ಬಂದಿದೆ.


Provided by

ನಮ್ಮ ಸರ್ಕಾರ ಈ ಬಾರಿ ಕರಾವಳಿಯ ಪ್ರಣಾಳಿಕೆಯೊಂದನ್ನು ಸಿದ್ಧಪಡಿಸಿದ್ದು 2500 ಕೋಟಿ ರೂಪಾಯಿಯನ್ನು ಹಿಂದುಳಿದ ವರ್ಗ, ಮೀನುಗಾರರ ಸಮುದಾಯದ ಜೊತೆಗೆ ಎಲ್ಲಾ ಸಮುದಾಯದ ಅಭಿವೃದ್ಧಿ ಗೆ ಕಾರ್ಯಕ್ರಮವನ್ನು ರೂಪಿಸಿದೆ ಎಂದು ಸೊರಕೆ ಹೇಳಿದ್ದಾರೆ.

ಬೈಂದೂರು ಕುಂದಾಪುರ, ಉಡುಪಿ, ಮಂಗಳೂರಿನಿಂದ ಸುಮಾರು 2 ಸಾವಿರ ಮೀನುಗಾರರು ಈ ಸಮಾವೇಶ ಸಂವಾದದಲ್ಲಿ ಭಾಗವಹಿಸಲಿದ್ದಾರೆ. ರಾಜ್ಯದ ಮೀನುಗಾರರ ಜೊತೆ ಸಂವಾದ ನಡೆಸೋ ಕಾರ್ಯಕ್ರಮ ಕಾಪು ಕ್ಷೇತ್ರದಲ್ಲಿ ನಡೀತಿದೆ ಎಂದು ಸೊರಕೆ ಹೇಳಿದರು.

ಜಿ ಶಂಕರ್ ಮೊಗವೀರ ಸಮುದಾಯದ ಜೊತೆ ಎಲ್ಲಾ ಸಮುದಾಯದ ಪ್ರಶ್ನಾತೀತ ನಾಯಕ . ಎಲ್ಲಾ ಸಮುದಾಯದ ನಾಯಕರನ್ನು ಕರಾವಳಿ ಉದ್ದಗಲದಲ್ಲಿ ಸಂಘಟಿಸಿ ಎಲ್ಲಾ ಸಮುದಾಯದ ಸಮಾಜ ಕಷ್ಟಕ್ಕೆ ಸ್ಪಂದಿಸಿದವರು. ಜಿ. ಶಂಕರ್ ಮೇಲೆ ಚುನಾವಣಾ ಸಮಯದಲ್ಲಿ ಬಿಜೆಪಿ ಪ್ರೇರಿತ ಐಟಿ ದಾಳಿ ಖಂಡನೀಯ.
ಜಿ. ಶಂಕರ್ ಉದ್ದೇಶ ಪೂರ್ವಕವಾಗಿ ಈ ಐಟಿ ದಾಳಿ ನಡೆಸಲಾಗಿದ್ದು ಇಡೀ ಸಮಾಜಕ್ಕೆ ಮಾಡಿದ ಅನ್ಯಾಯ ಎಂದು ವಿನಯ ಕುಮಾರ್ ಸೊರಕೆ ಬಿಜೆಪಿ ವಿರುದ್ಧ ಹರಿಹಾಯ್ದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅಶೋಕ್ ಕುಮಾರ್ ಕೊಡವೂರು, ನವೀನ್ ಚಂದ್ರ ಸುವರ್ಣ, ನವೀನ್ ಚಂದ್ರ ಜೆ ಶೆಟ್ಟಿ, ಟಿ ಪ್ರತಾಪನ್, ದೇವಿ ಪ್ರಸಾದ್ ಶೆಟ್ಟಿ, ರಾಜಶೇಖರ ಕೋಟ್ಯಾನ್, ವಿಲ್ಸನ್ ರೋಡ್ರಿಗಸ್, ಮಂಜುನಾಥ ಬಿ ಸೊಣೆಗಾರ್, ಹರಿಶ್ ಕಿಣಿ, ರಮೀಜ್ ಹುಸೇನ್, ಅಬ್ದುಲ್ ಗಫೂರ್, ಜೀತೇಂದ್ರ ಫುಟಾರ್ಡೋ, ಶಾಂತಲಾ, ಶರ್ಪುದ್ದೀನ್ ಶೇಖ್, ವಿಶ್ವಾಸ್ ಅಮೀನ್, ದಿನೇಶ್ ಕೋಟ್ಯಾನ್, ಅಮೀರ್ ಉಪಸ್ಥಿತರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ