ಮಸೀದಿಗೆ ನುಗ್ಗಿ ಇಮಾಮ್ಗೆ ಥಳಿತ: ಇಬ್ಬರು ಆರೋಪಿಗಳ ಬಂಧನ
![](https://www.mahanayaka.in/wp-content/uploads/2024/07/c6aadab9665b75bb3c807e306cde0a6b439f622b20299e3e8c25526b12aac59d.0-1024x768.webp)
ತೆಲಂಗಾಣದ ಬೈಂಸ ಗ್ರಾಮದಲ್ಲಿ ಮಸೀದಿಗೆ ನುಗ್ಗಿ ಇಮಾಮರನ್ನು ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ. ಈ ಘಟನೆಯು ಸ್ಥಳೀಯವಾಗಿ ಭಾರಿ ಆಕ್ರೋಶವನ್ನು ಹುಟ್ಟು ಹಾಕಿತ್ತು. ಜುಲೈ ಮೂರರಂದು ರಾತ್ರಿ ಸ್ಥಳೀಯ ಜಾಮಿಯಾ ಮಸೀದಿಗೆ ನುಗ್ಗಿದ ಈ ಇಬ್ಬರು ದುಷ್ಕರ್ಮಿಗಳು ಇಮಾಮ ರಾದ ಅಬ್ದುಲ್ ಅಜೀಜ್ ಅವರ ಕಾಲರ್ ಪಟ್ಟಿ ಹಿಡಿದು ಥಳಿಸಿದ್ದಾರೆ. ಅವರು ಇಶಾ ನಮಾಜ್ ಗಾಗಿ ತಯಾರಿ ನಡೆಸುತ್ತಿದ್ದರು.
ಆಝಾನ್ ನೀಡಬಾರದು ಎಂದು ಇಮಾಮರ ಕಾಲರ್ ಪಟ್ಟಿ ಹಿಡಿದು ಈ ದುಷ್ಕರ್ಮಿಗಳು ಬೆದರಿಸಿದ್ದಾರೆ. ಸ್ಥಳೀಯವಾಗಿ ಕೋಮುಗಲಭೆಯನ್ನು ಎಬ್ಬಿಸುವುದೇ ಇವರ ಉದ್ದೇಶ ಎಂದು ಹೇಳಲಾಗಿದೆ.
ಘಟನೆಯ ಬಳಿಕ ಸ್ಥಳೀಯ ಮುಸ್ಲಿಮರು ಮಸೀದಿಯ ಸುತ್ತ ನೆರೆದಿದ್ದಾರೆ. ಆ ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಬಂದೋಬಸ್ತು ನಡೆಸಿದ್ದಾರೆ. ಇಮಾಮರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ 27 ವರ್ಷದ ನವೀನ್ ರೆಡ್ಡಿ ಮತ್ತು ನಿತೀಶ್ ರೆಡ್ಡಿ ಅನ್ನು ಪೊಲೀಸರು ಬಂಧಿಸಿದ್ದಾರೆ. ಮಾತ್ರ ಅಲ್ಲ ನ್ಯಾಯಾಲಯವು ಅವರಿಗೆ 14 ದಿನಗಳ ಜುಡಿಶಿಯಲ್ ಕಸ್ಡಿಯನ್ನು ವಿಧಿಸಿದೆ. ಈ ಪ್ರದೇಶವು ಈ ಹಿಂದೆಯೂ ಕೋಮುಗಲಭೆಗಾಗಿ ಗುರುತಿಸಿಕೊಂಡಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth