ದಿಲ್ಲಿ ಜಲಾವೃತ ಆಗೋಕೇ ಕಾರಣವೇನು..? ಸಿಎಂ ಕೇಜ್ರಿವಾಲ್ ಕೊಟ್ಟ ಉತ್ತರವೇನು..?

ಯಮುನಾ ಬ್ಯಾರೇಜ್ನಲ್ಲಿ 32 ಗೇಟ್ಗಳ ಪೈಕಿ ಐದು ಗೇಟ್ಗಳನ್ನು ಮುಚ್ಚಲಾಗಿದೆ. ಹೀಗಾಗಿ ಸಮೀಪದ ಪ್ರದೇಶಗಳು ಜಲಾವೃತವಾಗಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸ್ಪಷ್ಟನೆ ನೀಡಿದ್ದಾರೆ.
ಯಮುನಾ ಬ್ಯಾರೇಜ್ ನ 5 ಗೇಟ್ ಗಳನ್ನು ತೆರೆಯುವ ಕಾಮಗಾರಿಯನ್ನು ಪರಿಶೀಲಿಸಿದ ಬಳಿಕ ಮಾತನಾಡಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ʼಈ 5 ಗೇಟ್ ಗಳನ್ನು ತೆರೆಯಲು ನಾವು ಪ್ರಯತ್ನಿಸುತ್ತಿದ್ದೇವೆ ಇದರಿಂದ ನೀರು ಬ್ಯಾರೇಜ್ ಗೆ ಹರಿಯುತ್ತದೆ. ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಈ ಗೇಟ್ ತೆರೆದರೆ ದೆಹಲಿಯಿಂದ ನೀರು ಹೊರಕ್ಕೆ ಹರಿಯುತ್ತದೆ, ಅದಕ್ಕಾಗಿ ನಾವು ಪ್ರಯತ್ನ ಮಾಡುತ್ತಿದ್ದೇವೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw