ದುರಂತದ ಮೇಲೆ ದುರಂತ: ವಯನಾಡ್ ಭೂಕುಸಿತದಲ್ಲಿ ಕುಟುಂಬಸ್ಥರನ್ನು‌ ಕಳೆದುಕೊಂಡ ಬೆನ್ನಲ್ಲೇ ಅಪಘಾತದಲ್ಲಿ ಭಾವಿ ಪತಿಯನ್ನು ಕಳೆದುಕೊಂಡ ಯುವತಿ - Mahanayaka
6:43 AM Wednesday 18 - September 2024

ದುರಂತದ ಮೇಲೆ ದುರಂತ: ವಯನಾಡ್ ಭೂಕುಸಿತದಲ್ಲಿ ಕುಟುಂಬಸ್ಥರನ್ನು‌ ಕಳೆದುಕೊಂಡ ಬೆನ್ನಲ್ಲೇ ಅಪಘಾತದಲ್ಲಿ ಭಾವಿ ಪತಿಯನ್ನು ಕಳೆದುಕೊಂಡ ಯುವತಿ

12/09/2024

ಜುಲೈನಲ್ಲಿ ಕೇರಳದ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ 24 ವರ್ಷದ ಶ್ರುತಿ ತನ್ನ ಇಡೀ ಕುಟುಂಬವನ್ನು ಕಳೆದುಕೊಂಡ ಬೆನ್ನಲ್ಲೇ ಆಕೆಯ ಭಾವಿ ಪತಿ ಜೆನ್ಸನ್ ಕಾರು ಅಪಘಾತದಲ್ಲಿ ಗಾಯಗೊಂಡು ಸಾವನ್ನಪ್ಪಿದ ಘಟನೆ ನಡೆದಿದೆ.

ಮೂಪೆನ್ ವೈದ್ಯಕೀಯ ಕಾಲೇಜಿನ ವೈದ್ಯರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಜೆನ್ಸನ್ ರಾತ್ರಿ 8:50 ಕ್ಕೆ ನಿಧನರಾದರು ಎಂದು ದೃಢಪಡಿಸಿದ್ದಾರೆ. ಮೂಗಿನಿಂದ ಅತಿಯಾದ ರಕ್ತಸ್ರಾವ ಮತ್ತು ಅವರ ಮೆದುಳಿನಲ್ಲಿ ತೀವ್ರ ರಕ್ತಸ್ರಾವದಿಂದ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಮಂಗಳವಾರ ಅವರ ಕಾರು ಖಾಸಗಿ ಬಸ್ ಗೆ ಮುಖಾಮುಖಿ ಡಿಕ್ಕಿ ಹೊಡೆದಿತ್ತು. ವಾಹನದಲ್ಲಿದ್ದ ಶ್ರುತಿ ಮತ್ತು ಜೆನ್ಸನ್ ಅವರ ಹಲವಾರು ಕುಟುಂಬ ಸದಸ್ಯರು ಸಹ ಗಾಯಗೊಂಡಿದ್ದರು. ವೈದ್ಯಕೀಯ ಸಿಬ್ಬಂದಿಯ ಸತತ ಪ್ರಯತ್ನಗಳ ಹೊರತಾಗಿಯೂ, ಕಾರು ಶುಚಿಗೊಳಿಸುವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಜೆನ್ಸನ್ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ.


Provided by

ಜುಲೈ 30ರಂದು ಸಂಭವಿಸಿದ ಭೂಕುಸಿತವು ಮೇಪ್ಪಾಡಿ ಪಂಚಾಯಿತಿಯ ಚೂರಲ್ಮಾಲಾ ಮತ್ತು ಮುಂಡಕ್ಕೈ ಗ್ರಾಮಗಳಲ್ಲಿ ಶ್ರುತಿಯ ಪೋಷಕರು ಶಿವಣ್ಣ ಮತ್ತು ಸಬಿತಾ ಮತ್ತು ಆಕೆಯ ಕಿರಿಯ ಸಹೋದರಿ ಶ್ರೇಯಾ ಸೇರಿದಂತೆ ಆಕೆಯ ಒಂಬತ್ತು ಕುಟುಂಬ ಸದಸ್ಯರ ಜೀವವನ್ನು ಬಲಿ ತೆಗೆದುಕೊಂಡಿತ್ತು. ಈ ದುರಂತದಿಂದ ಆಕೆಗೆ ಯಾವುದೇ ಹತ್ತಿರದ ಸಂಬಂಧಿಕರು ಇರಲಿಲ್ಲ. ಈ ನೋವಿನ ಸಮಯದಲ್ಲೇ ಈ ಯುವತಿಯು ಭಾವಿ ವರ ಜೆನ್ಸನ್ ಅವರೊಂದಿಗೆ ದಶಕದ ಸಂಬಂಧವನ್ನು ಹೊಂದಿದ್ದರು. ವಯನಾಡ್ ದುರಂತಕ್ಕೆ ಕೆಲವೇ ವಾರಗಳ ಮೊದಲು ಜೂನ್ 2 ರಂದು ದಂಪತಿಗಳು ನಿಶ್ಚಿತಾರ್ಥ ಮಾಡಿಕೊಂಡಿದ್ದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ